ವಾಸ್ತವವೂ ಅಲ್ಲ, ಸತ್ಯಾಂಶವೂ ಅಲ್ಲ: ನವೀನ್ ಉಲ್ ಹಕ್ ಗೆ ತಿರುಗೇಟು ಕೊಟ್ಟ ವಿರಾಟ್ ಕೊಹ್ಲಿ ಆರ್ ಸಿಬಿ ಮತ್ತು ಲಕ್ನೋ ತಂಡಗಳ ನಡುವಿನ ಪಂದ್ಯದ ಬಳಿಕ ನಡೆದ ಸಂಘರ್ಷದ ವಿಚಾರವಾಗಿ ಅಫ್ಘನ್ ಆಟಗಾರ ನವೀನ್ ಉಲ್ ಹಕ್ ಮಾಡಿದ್ದ ಪೋಸ್ಟ್ ಗೆ ವಿರಾಟ್ ಕೊಹ್ಲಿ ಖಡಕ್ ತಿರುಗೇಟು ನೀಡಿದ್ದಾರೆ. ಲಖನೌ: ಆರ್ ಸಿಬಿ ಮತ್ತು ಲಕ್ನೋ ತಂಡಗಳ ನಡುವಿನ ಪಂದ್ಯದ ಬಳಿಕ ನಡೆದ ಸಂಘರ್ಷದ ವಿಚಾರವಾಗಿ ಅಫ್ಘನ್ ಆಟಗಾರ ನವೀನ್ ಉಲ್ ಹಕ್ ಮಾಡಿದ್ದ ಪೋಸ್ಟ್ ಗೆ ವಿರಾಟ್ ಕೊಹ್ಲಿ ಖಡಕ್ ತಿರುಗೇಟು ನೀಡಿದ್ದಾರೆ.ಲಖನೌ ನ ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹಂಗಾಮಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ತಂಡ ಮೆಂಟರ್‌ ಗೌತಮ್ ಗಂಭೀರ್ ನಡುವೆ ವಾಗ್ವಾದ ನಡೆದಿದೆ. ಈ ಪಂದ್ಯದಲ್ಲಿ ಆರ್ಸಿಬಿ 18 ರನ್ಗಳ ಜಯ ದಾಖಲಿಸಿತು.ಆ ಬಳಿಕ ನಡೆದ ಆಟಗಾರರ ನಡುವಿನ ಹಸ್ತಲಾಘವದ ವೇಳೆ ಕೊಹ್ಲಿ ಹಾಗೂ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯದ ಬಳಿಕ ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದು, ಅಷ್ಟೇ ಅಲ್ಲದೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಉಭಯ ತಂಡಗಳ ಆಟಗಾರರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸಿದ್ದಾರೆ. ಆದರೆ ಇವರ ಜಗಳದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.ಇದನ್ನೂ ಓದಿ: ಕ್ರಿಕೆಟ್ ಜಗತ್ತನ್ನೇ ಬೆಚ್ಚಿ ಬೀಳಿಸಿದ 'ಕೊಹ್ಲಿ-ಗಂಭೀರ್ ಆನ್ ಫೀಲ್ಡ್ ಜಗಳ'.. ಇಷ್ಟಕ್ಕೂ ಕಾರಣವೇನು? ಸಂಘರ್ಷದ ಮೂಲ ಪುರುಷ 'ನವೀನ್ ಉಲ್ ಹಕ್' ಹೇಳಿದ್ದೇನು?ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ನವೀನ್ ಉಲ್ ಹಕ್ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ, "ನಿಮಗೆ ಅರ್ಹವಾದದ್ದನ್ನು ನೀವು ಪಡೆಯುತ್ತೀರಿ... ಅದು ಹೇಗಿರಬೇಕೋ ಅದು ಹಾಗೆಯೇ ನಡೆಯುತ್ತದೆ" ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: : ಮೈದಾನದಲ್ಲೇ ಜಗಳಕ್ಕಿಳಿದು ಒಂದು ಕೋಟಿ ದಂಡ ಕಟ್ಟಿದ ಕಿಂಗ್ ಕೊಹ್ಲಿ; ಗಂಭೀರ್ ಕಳೆದುಕೊಂಡಿದ್ದೆಷ್ಟು?ಇದೀಗ ಇದಕ್ಕೆ ವಿರಾಟ್ ಕೊಹ್ಲಿ ಕೂಡ ತಿರುಗೇಟು ನೀಡಿದ್ದು, ರೋಮನ್ ಚಕ್ರವರ್ತಿ ಮಾರ್ಕಸ್ ಆರೆಲಿಯಸ್ ಅವರ ಉಲ್ಲೇಖವನ್ನು ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. "ನಾವು ಕೇಳುವ ಪ್ರತಿಯೊಂದೂ ಒಂದು ಅಭಿಪ್ರಾಯವಾಗಿರುತ್ತದೆಯೇ ಹೊರತು ಸತ್ಯವಲ್ಲ. ನಾವು ನೋಡುವ ಪ್ರತಿಯೊಂದೂ ದೃಷ್ಟಿಕೋನವಾಗಿರುತ್ತದೆಯೇ ಹೊರತು ಅದು ವಾಸ್ತಾವಾಂಶವಲ್ಲ ಎಂದು ಹೇಳುವ ಮೂಲಕ ನವೀನ್ ಉಲ್ ಹಕ್ ಗೆ ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: 2023: ಲಖನೌ ಎದುರಿಗೆ ಬೆಂಗಳೂರಿಗೆ ಜಯ, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿಇನ್ನು ಆನ್ ಫೀಲ್ಡ್ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಮೂವರೂ ಆಟಗಾರರಿಗೆ ದುಬಾರಿ ದಂಡ ಕೂಡ ವಿಧಿಸಿದೆ.