ವೈಡ್ ಕೊಡದ ಅಂಪೈರ್ ಮೇಲೆ ತಾಳ್ಮೆ ಕಳೆದುಕೊಂಡ ದೀಪಕ್ ಹೂಡಾ, ಬ್ಯಾಟ್ ತೋರಿಸಿ ಉದ್ದಟತನ; ವಿಡಿಯೋ ವೈರಲ್! ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಗಳಿಸಿದೆ. ಇನ್ನು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ದೀಪಕ್ ಹೂಡಾ ತಾಳ್ಮೆ ಕಳೆದುಕೊಂಡು ಅಂಪೈರ್ ಮೇಲೆ ತಮ್ಮ ಕೋಪಾಟೋಪ ತೋರಿಸಿದ್ದಾರೆ. ಮುಂಬೈ: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಗಳಿಸಿದೆ. ಇನ್ನು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ದೀಪಕ್ ಹೂಡಾ ತಾಳ್ಮೆ ಕಳೆದುಕೊಂಡು ಅಂಪೈರ್ ಮೇಲೆ ತಮ್ಮ ಕೋಪಾಟೋಪ ತೋರಿಸಿದ್ದಾರೆ.ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದ ಭಾರತೀಯ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಕಸುನ್ ರಜಿತಾ ಅವರ ಐದನೇ ಎಸೆತವನ್ನು ಹೂಡಾ ಆಡಲು ಪ್ರಯತ್ನಿಸಿ ಆಫ್ ಸೈಡ್ ಕಡೆಗೆ ಬಂದರು. ಇನ್ನು ಚೆಂಡನ್ನು ವೈಡ್ ಎಂದು ಅಂಪೈರ್ ಘೋಷಿಸುತ್ತಾರೆ ಎಂದು ಎಂದು ಭಾವಿಸಿದರು. ../PdJoraDa6nಆದರೆ ಮೈದಾನದ ಅಂಪೈರ್ ವೈಡ್ ಸಿಗ್ನಲ್ ನೀಡಿಲಿಲ್ಲ. ಇದು ದೀಪಕ್ ಹೂಡಾ ಅವರನ್ನು ಕೆರಳಿಸಿತು. ಮುಂದಿನ ಎಸೆತದಲ್ಲಿ ಸಿಂಗಲ್ ಗಳಿಸಿದ ನಂತರ ದೀಪಕ್ ಹೂಡಾ ಅಂಪೈರ್ ಜೊತೆ ವಾಗ್ವಾದಕ್ಕಿಳಿದಿದಿದ್ದರು. ಕೆಲವು ನಿಂದನೀಯ ಪದಗಳನ್ನು ಬಳಸಿದಲ್ಲದೆ ಬ್ಯಾಟ್ ಸಹ ತೋರಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದಕ್ಕೆ ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಇದನ್ನೂ ಓದಿ: ಪ್ರವೇಶ ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಭಾರತದ ಬೌಲರ್ ಶಿವಂ ಮಾವಿಮಂಗಳವಾರದ ಪಂದ್ಯದಲ್ಲಿ, ಹೂಡಾ 23 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ ಅಜೇಯ 41 ರನ್ ಗಳಿಸಿದರು. ಇದರಿಂದಾಗಿ ಭಾರತ 162 ರನ್ ಬಾರಿಸಲು ಸಾಧ್ಯವಾಗಿದ್ದು ಪಂದ್ಯದಲ್ಲಿ ಜಯ ಗಳಿಸಿತ್ತು. ಉತ್ತಮ ಪ್ರದರ್ಶನ ನೀಡಿದ ಹೂಡಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಗುರುವಾರ ಪುಣೆಯಲ್ಲಿ ನಡೆಯಲಿದೆ.