ಜಾರ್ಖಂಡ್‌ನಲ್ಲಿ ಹಳಿತಪ್ಪಿದ ಹೌರಾ-ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌: ಇಬ್ಬರು ಸಾವು, 20 ಮಂದಿಗೆ ಗಾಯ ಆಗ್ನೇಯ ರೈಲ್ವೆಯ () ಚಕ್ರಧರಪುರ ವಿಭಾಗದ ಅಡಿಯಲ್ಲಿ ಜಮ್ಶೆಡ್‌ಪುರದಿಂದ 80 ಕಿಮೀ ದೂರದಲ್ಲಿರುವ ಬಾರಾಬಾಂಬೂ ಬಳಿ ಇಂದು ನಸುಕಿನ ಜಾವ 3.45ಕ್ಕೆ ಅಪಘಾತ ಸಂಭವಿಸಿದೆ. ನವದೆಹಲಿ: ಇಂದು ಮಂಗಳವಾರ ಮುಂಜಾನೆ ಜಾರ್ಖಂಡ್‌ನ ಚಕ್ರಧರಪುರ ಜಿಲ್ಲೆಯ ರಾಜ್‌ಖರ್ಸಾವನ್ ಮತ್ತು ಬಡಬಾಂಬೋ ನಡುವೆ 12810 ಹೌರಾ-ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ನ 18 ಬೋಗಿಗಳು ಹಳಿತಪ್ಪಿ ಇಬ್ಬರು ಮೃತಪಟ್ಟು 20 ಪ್ರಯಾಣಿಕರು ಗಾಯಗೊಂಡಿದ್ದಾರೆ.ಆಗ್ನೇಯ ರೈಲ್ವೆಯ () ಚಕ್ರಧರಪುರ ವಿಭಾಗದ ಅಡಿಯಲ್ಲಿ ಜಮ್ಶೆಡ್‌ಪುರದಿಂದ 80 ಕಿಮೀ ದೂರದಲ್ಲಿರುವ ಬಾರಾಬಾಂಬೂ ಬಳಿ ಇಂದು ನಸುಕಿನ ಜಾವ 3.45ಕ್ಕೆ ಅಪಘಾತ ಸಂಭವಿಸಿದೆ.# | : . 12810 - , 3:45 . . ( ) ../qYAmk2bpEgರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಎನ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ಧಾವಿಸುತ್ತಿದೆ ಎಂದು ಅಪಘಾತ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಡಿಸಿ ಪಶ್ಚಿಮ ಸಿಂಗ್‌ಭೂಮ್ ಕುಲದೀಪ್ ಚೌಧರಿ ಪಿಟಿಐಗೆ ತಿಳಿಸಿದ್ದಾರೆ.ಅಪಘಾತದ ಸ್ಥಳವು ಪಶ್ಚಿಮ ಸಿಂಗ್ಭೂಮ್ ಮತ್ತು ಸೆರೈಕೆಲಾ-ಖರ್ಸಾವಾನ್ ಜಿಲ್ಲೆಗಳ ನಡುವಿನ ಗಡಿಯ ಸಮೀಪದಲ್ಲಿದೆ. ಈ ರೈಲಿನ ಇಂಜಿನ್ ಕೂಡ ಹಳಿ ತಪ್ಪಿದೆ. ಹಳಿತಪ್ಪಿದ ಬೋಗಿಗಳ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಸಮೀಪದ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ.ರೈಲ್ವೆ ಹಂಚಿಕೊಂಡ ಆರಂಭಿಕ ವರದಿಯ ಪ್ರಕಾರ, ಹಳಿತಪ್ಪುವಿಕೆಯಿಂದ ಹೌರಾ-ಮುಂಬೈ ರೈಲು ಮಾರ್ಗಗಳಲ್ಲಿ ಚಲನೆಗೆ ಅಡ್ಡಿಯಾಗಿದೆ. ಆಗ್ನೇಯ ರೈಲ್ವೆ ಕೆಲವು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಿದೆ, ಇದರಲ್ಲಿ 22861 ಹೌರಾ-ತಿತ್ಲಗಢ-ಕಾಂತಬಾಂಜಿ ಇಸ್ಪತ್ ಎಕ್ಸ್‌ಪ್ರೆಸ್ ಮತ್ತು 12021 ಹೌರಾ-ಬರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್ ಸೇರಿವೆ.ರೈಲ್ವೆ ವೈದ್ಯಕೀಯ ವ್ಯಾನ್ ಮತ್ತು ಇತರ ರಕ್ಷಣಾ ಸೌಲಭ್ಯಗಳು ರೈಲಿನ 18 ಬೋಗಿಗಳು ಹಳಿ ತಪ್ಪಿದ ನಂತರ ಆಗ್ನೇಯ ರೈಲ್ವೆ ಮಂಗಳವಾರ ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದೆ.ಮುಂಬೈ ಸಹಾಯವಾಣಿ ಸಂಖ್ಯೆಗಳುಮುಂಬೈ - 022-22694040, ದಾದರ್ - 9136452387, ಕಲ್ಯಾಣ್ - 8356848078 ಮತ್ತು ಥಾಣೆ - 9321336747.ಹೌರಾದ ಸಹಾಯವಾಣಿ ಸಂಖ್ಯೆಗಳು 9433357920 ಮತ್ತು 033-26382217, ಮತ್ತು ಶಾಲಿಮಾರ್ 7595074427 ಮತ್ತು 6295531471 ಮತ್ತು ಖರಗ್‌ಪುರಕ್ಕೆ 03222-293764