ಉತ್ತರ ಪ್ರದೇಶ: ಮುಸ್ಲಿಂ ಮತಾಂತರದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ; ಸಮಾರಂಭ ಮಾಡೇ ಮಾಡ್ತೀವಿ ಅಂದ ! ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವಕ-ಯುವತಿಯರ ವಿವಾಹಗಳನ್ನು ನಡೆಸಲಾಗುವುದು ಮತ್ತು ಮೊದಲ ಹಂತದಲ್ಲಿ ಐದು ಜೋಡಿಗಳ ವಿವಾಹಗಳನ್ನು ನಡೆಸಲಾಗುವುದು ಎಂದು ಐಎಂಸಿ ಮುಖ್ಯಸ್ಥರು ಈ ಹಿಂದೆ ತಿಳಿಸಿದ್ದರು. ಲಖನೌ: ಇಸ್ಲಾಂಗೆ ಮತಾಂತರಗೊಂಡ ಇತರ ಧರ್ಮದ ಯುವಕ ಮತ್ತು ಯುವತಿಯರು ಸಾಮೂಹಿಕ ವಿವಾಹ ನಡೆಸಲು ಅನುಮತಿ ನೀಡುವಂತೆ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ (ಐಎಂಸಿ) ಪ್ರಸ್ತಾಪಕ್ಕೆ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿದೆ.ನಾವು ಕಾನೂನಿನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಐಎಂಸಿ ಮುಖ್ಯಸ್ಥ ಮೌಲಾನಾ ತೌಕೀರ್ ರಜಾ ಖಾನ್ ಹೇಳಿದ್ದಾರೆ. ಜಿಲ್ಲಾಡಳಿತದ ಅನುಮತಿ ಪಡೆದ ನಂತರವೇ ಸಾಮೂಹಿಕ ನಿಕಾಹ್ ಸಮಾರಂಭವನ್ನು ಆಯೋಜಿಸಲಾಗುವುದು. ಈ ಬಗ್ಗೆ ಆಡಳಿತದಿಂದ ಅನುಮತಿ ಕೋರಿದ್ದೆವು, ಆದರೆ ನಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆಡಳಿತದ ಅನುಮತಿಯಿಲ್ಲದೆ ಈ ಕಾರ್ಯವನ್ನು ಆಯೋಜಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.ಐಎಂಸಿ ರಾಜ್ಯ ಉಸ್ತುವಾರಿ ನದೀಮ್ ಖುರೇಷಿ ಮಾತನಾಡಿ, ಜೋಡಿಗಳ ಮತಾಂತರ ಮತ್ತು ನಿಕಾಹ್ ಕಾರ್ಯಕ್ರಮವನ್ನು ಆಯೋಜಿಸಲು ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು. ಸಾಮೂಹಿಕ ನಿಕಾಹ್ ಮತ್ತು ಮತಾಂತರ ಕಾರ್ಯಕ್ರಮಗಳನ್ನು ಆಯೋಜಿಸಲು ಐಎಂಸಿ ಸಿಟಿ ಮ್ಯಾಜಿಸ್ಟ್ರೇಟ್‌ನಿಂದ ಅನುಮತಿ ಕೋರಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಭಾನುವಾರ ರಾತ್ರಿ ಹೇಳಿದ್ದಾರೆ.ಇಸ್ಲಾಂಗೆ ಮತಾಂತರಗೊಂಡ ಹಿಂದೂ ಯುವಕ-ಯುವತಿಯರ ವಿವಾಹಗಳನ್ನು ನಡೆಸಲಾಗುವುದು ಮತ್ತು ಮೊದಲ ಹಂತದಲ್ಲಿ ಐದು ಜೋಡಿಗಳ ವಿವಾಹಗಳನ್ನು ನಡೆಸಲಾಗುವುದು ಎಂದು ಐಎಂಸಿ ಮುಖ್ಯಸ್ಥರು ಈ ಹಿಂದೆ ತಿಳಿಸಿದ್ದರು. ಇದರಲ್ಲಿ ಯುವಕ-ಯುವತಿಯರು ಧಾರ್ಮಿಕ ಮತಾಂತರ ಪ್ರಕ್ರಿಯೆ ಮುಗಿಸಿ ಪರಸ್ಪರ ಸೇರಿಕೊಳ್ಳಲಿದ್ದಾರೆ.ಜುಲೈ 21ರಂದು ಬೆಳಗ್ಗೆ 11 ಗಂಟೆಗೆ ಖಲೀಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಾಮೂಹಿಕ ನಿಕಾಹ್ ಸಮಾರಂಭ ನಡೆಯಲಿದೆ ಎಂದು ಖಾನ್ ಹೇಳಿದ್ದರು. ಈ ನಿಟ್ಟಿನಲ್ಲಿ ಆಡಳಿತದಿಂದ ಅನುಮತಿ ಕೋರಲಾಗಿತ್ತು. ಐಎಂಸಿಯ ಉದ್ದೇಶಿತ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವಾದಗಳು ಹುಟ್ಟಿಕೊಂಡಿವೆ. ಖಾನ್ ಬಂಧನಕ್ಕೆ ಆಗ್ರಹಿಸಿ ಮಂಗಳವಾರ ಬರೇಲಿಯಲ್ಲಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನೂ ಸಲ್ಲಿಸಿದರು.