ಈಗ ಅಪ್ರಸ್ತುತ, ಮಾತನಾಡಿ ಏನು ಪ್ರಯೋಜನ: ಕಾಂಗ್ರೆಸ್ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಪ್ರಸ್ತುತವಾಗಿದೆ ಎಂದು ಬುಧವಾರ ಕಾಂಗ್ರೆಸ್ ಹೇಳಿದೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಮಾಜಕ್ಕೆ ಸಂಘ ಅಥವಾ ಅದರ ಮುಖ್ಯಸ್ಥ ಮೋಹನ್ ಭಾಗವತ್ ಅಗತ್ಯವಿಲ್ಲ, ಏಕೆಂದರೆ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎಂದಿದೆ. ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಪ್ರಸ್ತುತವಾಗಿದೆ ಎಂದು ಬುಧವಾರ ಕಾಂಗ್ರೆಸ್ ಹೇಳಿದೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಮಾಜಕ್ಕೆ ಸಂಘ ಅಥವಾ ಅದರ ಮುಖ್ಯಸ್ಥ ಮೋಹನ್ ಭಾಗವತ್ ಅಗತ್ಯವಿಲ್ಲ, ಏಕೆಂದರೆ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರು ಎಂದಿದೆ.ಮಣಿಪುರ ಹಿಂಸಾಚಾರ ಮತ್ತು ಈಗಷ್ಟೇ ಮುಕ್ತಾಯಗೊಂಡ ಲೋಕಸಭೆ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಭಾಗವತ್ ಅವರ ಹೇಳಿಕೆಗಳ ನಂತರ ಕಾಂಗ್ರೆಸ್ ಈ ರೀತಿ ಹೇಳಿದೆ.ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, "ಮೋಹನ್ ಭಾಗವತ್ ಜೀ, ನೀವು ಬಿತ್ತಿದ್ದನ್ನು ನೀವು ಕೊಯ್ಯುತ್ತೀರಿ. ತಪ್ಪು ಮಣ್ಣಿನದ್ದಲ್ಲ, ತೋಟಗಾರನ ತಪ್ಪು. ರಾಜಧಾನಿಯ ಹೊರಗೆ ರೈತರು ಹವಾಮಾನ ಮತ್ತು ಪೊಲೀಸರ ಕೋಪವನ್ನು ಎದುರಿಸುತ್ತಿರುವಾಗ ನೀವು ಮೌನವಾಗಿದ್ದಿರಿ. ಹತ್ರಾಸ್‌ನಲ್ಲಿ ದಲಿತ ಹುಡುಗಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದಾಗ, ಬಿಲ್ಕಿಸ್ ಬಾನೋ ಮೇಲಿನ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದಾಗ, ದಲಿತರ ಮೇಲೆ ಮೂತ್ರ ವಿಸರ್ಜಿಸಿದಾಗ,ಕನ್ಹಯ್ಯಾ ಲಾಲ್‌ನ ಕೊಲೆಗಾರರ ಸಂಬಂಧವನ್ನು ಬಿಜೆಪಿಯೊಂದಿಗೆ ಬಹಿರಂಗಪಡಿಸಿದಾಗ, ನೀವು ಮೌನವಾಗಿದ್ದಿರಿ ಎಂದು ಖೇರಾ ಹೇಳಿದ್ದಾರೆ.भागवत जी, याद है वह संत कबीर का दोहा करता रहा सो क्यों किया, अब करी क्यों पछताए | बोये पेड़ बबूल का, अमुआ कहाँ से पाए || पर कहते हैं न अब पछताए होत क्या जब चिड़िया चुग गई खेत। ://./wWvXglskfpನರೇಂದ್ರ ಮೋದಿ ನಿಮ್ಮನ್ನು ಮತ್ತು ಸಂಘವನ್ನು ಅಪ್ರಸ್ತುತಗೊಳಿಸಿದ್ದಾರೆ. ಅಮಿತ್ ಶಾ ಮತ್ತು ಬಿಜೆಪಿ ನಿಮ್ಮನ್ನು ಅಪ್ರಸ್ತುತಗೊಳಿಸಿದೆ.ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುವಾಗ, ನೀವು ಮಾತನಾಡಬೇಕಿತ್ತು ಆದರೆ ನೀವು ಮೌನವಾಗಿದ್ದೀರಿ "ಈಗ ಮಾತಾಡಿ ಏನು ಪ್ರಯೋಜನ?ಎಂದಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಈ ಸಮಾಜಕ್ಕೆ ಆರ್‌ಎಸ್‌ಎಸ್ ಅಥವಾ ಭಾಗವತ್ ಅಗತ್ಯವಿಲ್ಲ ಏಕೆಂದರೆ ಅವರು ತಮ್ಮನ್ನು ತಾವು "ರಕ್ಷಿಸಿಕೊಳ್ಳಬಹುದು ಎಂದು ಖೇರಾ ಹೇಳಿದ್ದಾರೆ.ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೂಡ ಭಾಗವತ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಂದು ವರ್ಷದ ನಂತರವೂ ಮಣಿಪುರದಲ್ಲಿ ಶಾಂತಿ ಹದಗೆಡುತ್ತಿರುವ ಬಗ್ಗೆ ಭಾಗವತ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದರು ಮತ್ತು ಕಲಹ ಪೀಡಿತ ಈಶಾನ್ಯ ರಾಜ್ಯದ ಪರಿಸ್ಥಿತಿಯನ್ನು ಆದ್ಯತೆಯೊಂದಿಗೆ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು.