ದೇಶದಲ್ಲಿ ಜಾತಿಗಣತಿಗೆ ನಮ್ಮ ತಕರಾರಿಲ್ಲ, ಆದರೆ..: ಸ್ಪಷ್ಟನೆ 'ನಿರ್ದಿಷ್ಟ ಸಮುದಾಯಗಳು ಅಥವಾ ಜಾತಿಗಳ ಮಾಹಿತಿಯನ್ನು ಸಂಗ್ರಹಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಈ ಮಾಹಿತಿಯನ್ನು ಅವರ ಕಲ್ಯಾಣಕ್ಕಾಗಿ ಮಾತ್ರ ಬಳಸಿಕೊಳ್ಳಬೇಕೇ ಹೊರತು ಚುನಾವಣಾ ಲಾಭಕ್ಕಾಗಿ ರಾಜಕೀಯ ಸಾಧನವಾಗಿ ಬಳಸಿಕೊಳ್ಳಬಾರದು'.. ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸುತ್ತಿರುವ ಜಾತಿಗಣತಿ ವಿಚಾರವಾಗಿ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (), ದೇಶದಲ್ಲಿ ಜಾತಿಗಣತಿಗೆ ನಮ್ಮ ತಕರಾರಿಲ್ಲ ಎಂದು ಹೇಳಿದೆ.ಕೇರಳದ ಪಾಲಕ್ಕಾಡ್ ನಲ್ಲಿ ನಡೆದ ''ಸಮನ್ವೇ ಬೈಠಕ್'' ಎಂಬ ಮೂರು ದಿನಗಳ ಸಮನ್ವಯ ಸಮಾವೇಶದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್(ಮುಖ್ಯಸ್ಥ) ಸುನೀಲ್ ಅಂಬೇಕರ್, 'ನಿರ್ದಿಷ್ಟ ಸಮುದಾಯಗಳು ಅಥವಾ ಜಾತಿಗಳ ಮಾಹಿತಿಯನ್ನು ಸಂಗ್ರಹಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಈ ಮಾಹಿತಿಯನ್ನು ಅವರ ಕಲ್ಯಾಣಕ್ಕಾಗಿ ಮಾತ್ರ ಬಳಸಿಕೊಳ್ಳಬೇಕೇ ಹೊರತು ಚುನಾವಣಾ ಲಾಭಕ್ಕಾಗಿ ರಾಜಕೀಯ ಸಾಧನವಾಗಿ ಬಳಸಿಕೊಳ್ಳಬಾರದು ಎಂದು ಹೇಳಿದರು.ಹಿಂದೂ ಸಮಾಜಕ್ಕೆ ಜಾತಿ ಮತ್ತು ಜಾತಿ-ಸಂಬಂಧಗಳು 'ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗಾಗಿ ಇದು ಮುಖ್ಯವಾಗಿದೆ ಎಂದು ಹೇಳಿದರು. ಅಂತೆಯೇ ಇದನ್ನು ಕೇವಲ ಚುನಾವಣೆ ಅಥವಾ ರಾಜಕೀಯದ ಆಧಾರದಲ್ಲಿ ಪರಿಗಣಿಸದೆ 'ಬಹಳ ಗಂಭೀರವಾಗಿ' ವ್ಯವಹರಿಸಬೇಕು ಎಂದರು."ಆರ್‌ಎಸ್‌ಎಸ್ ಯೋಚಿಸುವಂತೆ, ಹೌದು, ಖಂಡಿತವಾಗಿಯೂ ಎಲ್ಲಾ ಕಲ್ಯಾಣ ಚಟುವಟಿಕೆಗಳಿಗೆ, ಹಿಂದುಳಿದಿರುವ ನಿರ್ದಿಷ್ಟ ಸಮುದಾಯ ಅಥವಾ ಜಾತಿಯನ್ನು ಉದ್ದೇಶಿಸಿ ಮತ್ತು ಕೆಲವು ಸಮುದಾಯಗಳು ಮತ್ತು ಜಾತಿಗಳಿಗೆ ವಿಶೇಷ ಗಮನ ಬೇಕು. ಆದ್ದರಿಂದ, ಅದಕ್ಕಾಗಿ ಸರ್ಕಾರಕ್ಕೆ ಸಂಖ್ಯೆಗಳ ಅಗತ್ಯವಿದೆ. ಜಾತಿ ಗಣತಿ ಮೂಲಕ ಅದನ್ನು ತೆಗೆದುಕೊಳ್ಳಬಹುದು. 3- , . ../SAPz1ko827ಆದರೆ ಅದು ಆ ಸಮುದಾಯಗಳು ಮತ್ತು ಜಾತಿಗಳ ಕಲ್ಯಾಣವನ್ನು ತಿಳಿಸಲು ಮಾತ್ರ ಆಗಿರಬೇಕು. ಇದನ್ನು ಚುನಾವಣಾ ಪ್ರಚಾರಕ್ಕೆ ರಾಜಕೀಯ ಸಾಧನವಾಗಿ ಬಳಸಬಾರದು. ಆದ್ದರಿಂದ ನಾವು ಎಲ್ಲರಿಗೂ ಎಚ್ಚರಿಕೆಯ ರೇಖೆಯನ್ನು ಹಾಕುತ್ತೇವೆ" ಎಂದು ಅಂಬೇಕರ್ ಹೇಳಿದರು.ಪರಿಣಾಮಕಾರಿ ನೀತಿ ನಿರೂಪಣೆಗಾಗಿ ಜಾತಿ ಗಣತಿಯನ್ನು ನಡೆಸಲು ಬಯಸುತ್ತಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಇತರ ಒಕ್ಕೂಟ ಮಿತ್ರಪಕ್ಷಗಳ ಒತ್ತಾಯದ ನಡುವೆ ಅಂಬೇಕರ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.