ಆಗಸ್ಟ್ 15 ರಿಂದ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಆಂದೋಲನ ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯಿಂದ ಆಂದೋಲನ ಆರಂಭಿಸಲು ಯೋಜಿಸಲಾಗಿದೆ. ಲಖನೌ: ನಿರುದ್ಯೋಗ, ಬೆಲೆ ಏರಿಕೆ ಮತ್ತು ಮಹಿಳೆಯರ ಮೇಲಿನ ಅಪರಾಧಗಳನ್ನು ಖಂಡಿಸಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕ ಬೃಹತ್ ಆಂದೋಲನ ನಡೆಸಲು ನಿರ್ಧರಿಸಿದೆ.ಬೀದಿ ನಾಟಕಗಳು, ಹಳ್ಳಿಗಳಲ್ಲಿ ರಾತ್ರಿ ಶಿಬಿರಗಳು ಮತ್ತು ಪಭತ್ ಫೆರಿಸ್ ಆಯೋಜಿಸುವ ಮೂಲಕ ರಾಜ್ಯಾದ್ಯಂತ ಬೃಹತ್ ಆಂದೋಲನ ಆಯೋಜಿಸುತ್ತಿದೆ. ಯುಪಿ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯಿಂದ ಆಂದೋಲನ ಆರಂಭಿಸಲು ಯೋಜಿಸಲಾಗಿದೆ.ಇತ್ತೀಚೆಗಷ್ಟೇ ನಡೆದ ಹಿರಿಯ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚಿನ ಲೋಕಸಭಾ ಚುನಾವಣೆಯ ಸಮಯದಲ್ಲಿ ಗಳಿಸಿದ ಬಿಜೆಪಿ ವಿರೋಧಿ ಅಲೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದರ ಕುರಿತು ಪ್ರತಿಕ್ರಿಯೆ ಮತ್ತು ಸಲಹೆಗಳಿಗಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಅವರು ಸಭೆ ಕರೆದಿದ್ದರು.ಪಕ್ಷದ ಮುಖ್ಯ ವಿಭಾಗವು ರಾತ್ರಿ ಶಿಬಿರಗಳು ಮತ್ತು “ಪ್ರಭಾತ್ ಪೇರಿ” ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಸಾಂಸ್ಕೃತಿಕ ವಿಭಾಗವು “ನುಕ್ಕಡ್ ಸಭೆಗಳನ್ನು” ಆಯೋಜಿಸುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ನಿರುದ್ಯೋಗ, ಮಹಿಳೆಯರ ಮೇಲಿನ ಅಪರಾಧ, ಬೆಲೆ ಏರಿಕೆಯಂತಹ ಸಮಸ್ಯೆಗಳು ಸಾಮಾನ್ಯ ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ಅಜಯ್ ರೈ ಅವರು ಹೇಳಿದ್ದಾರೆ.