ಜಮ್ಮು-ಕಾಶ್ಮೀರ: 30 ವರ್ಷಗಳ ಬಳಿಕ ಬಾಗಿಲು ತೆರೆದ ಉಮಾ ಭಗವತಿ ದೇಗುಲ! ರಾಜಸ್ಥಾನದಿಂದ ತರಲಾದ ಉಮಾ ದೇವಿಯ ವಿಗ್ರಹವನ್ನು ಧಾರ್ಮಿಕ ಸ್ತೋತ್ರ ಪಠಣಗಳ ನಡುವೆ ಗರ್ಭಗುಡಿಯಲ್ಲಿ ಇರಿಸಲಾಯಿತು. ಸ್ಥಳೀಯರು, ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರು, ದೇವಾಲಯದ ಜೀರ್ಣೋದ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅನಂತನಾಗ್: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿನ ಪ್ರಸಿದ್ಧ ಉಮಾ ಭಗವತಿ ದೇಗುಲದ ಬಾಗಿಲನ್ನು 30 ವರ್ಷಗಳ ನಂತರ ಭಾನುವಾರ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಸಮ್ಮುಖದಲ್ಲಿ ತೆರೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೀರ್ಣೋದ್ಧಾರ ಕಾರ್ಯದ ನಂತರ ದೇವಾಲಯವನ್ನು ಭಕ್ತರಿಗೆ ತೆರೆಯಲಾಯಿತು ಎಂದು ಅವರು ಹೇಳಿದರು.सन-1990 में माँ उमा भगवती मंदिर ध्वस्त कर दिया गया था अब उस मंदिर का अनावरण निर्माण हुआ है ,आज प्राण प्रतिष्ठा सम्पन हुआ इस से कश्मीरी पंडितों में विस्वास बढ़ा जो आपसी स्वहाथ का सदेश है 3 दिन से चल रहे यज्ञ का समापन आज संपन हुआ , इस पुनित कार्य में समलित होने का अवसर मिला ../vG5ntgkCWKರಾಜಸ್ಥಾನದಿಂದ ತರಲಾದ ಉಮಾ ದೇವಿಯ ವಿಗ್ರಹವನ್ನು ಧಾರ್ಮಿಕ ಸ್ತೋತ್ರ ಪಠಣಗಳ ನಡುವೆ ಗರ್ಭಗುಡಿಯಲ್ಲಿ ಇರಿಸಲಾಯಿತು. ಸ್ಥಳೀಯರು, ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರು, ದೇವಾಲಯದ ಜೀರ್ಣೋದ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.34 ವರ್ಷಗಳ ನಂತರ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿರುವುದು ಸಂತಸ ತಂದಿದೆ. ನಮ್ಮ ಪಂಡಿತ ಸಹೋದರರಿಗೆ ಸಾಧ್ಯವಿರುವ ರೀತಿಯಲ್ಲಿ ಸಹಾಯ ಮಾಡುತ್ತೇವೆ ಎಂದು ಸ್ಥಳೀಯ ನಿವಾಸಿ ಗುಲ್ಜಾರ್ ಅಹ್ಮದ್ ಹೇಳಿದರು.