ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾವನ್ನು ನೆಲೆಯಾಗಿಸಿಕೊಳ್ಳಲು ಬಿಡುವುದಿಲ್ಲ: ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾವನ್ನು ನೆಲೆಯಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ. ಕೊಲಂಬೋ: ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾವನ್ನು ನೆಲೆಯಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.ಬ್ರಿಟನ್‌ ಮತ್ತು ಫ್ರಾನ್ಸ್‌ನ ಅಧಿಕೃತ ಪ್ರವಾಸದಲ್ಲಿರುವ ರಾನಿಲ್ ವಿಕ್ರಮಸಿಂಘೆ ಅವರು, ಫ್ರಾನ್ಸ್‌ನ ಅಧಿಕೃತ ಮಾಧ್ಯಮ ಫ್ರಾನ್ಸ್ 24 ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ, 'ಭಾರತಕ್ಕೆ ಬೆದರಿಕೆ ಒಡ್ಡಲು ಶ್ರೀಲಂಕಾವನ್ನು ನೆಲೆಯಾಗಿ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಈ ವಿಷಯದಲ್ಲಿ ದ್ವೀಪ ರಾಷ್ಟ್ರವು ‘ತಟಸ್ಥ’ವಾಗಿ ಉಳಿಯಲಿದ್ದು, ಚೀನಾದ ಜೊತೆಗೆ ಈ ಕುರಿತು ಯಾವುದೇ ಮಿಲಿಟರಿ ಒಪ್ಪಂದ ಆಗಿಲ್ಲ ಎಂದು ಹೇಳಿದರು.ಇದನ್ನೂ ಓದಿ: ಭಾರತದ ದಾಖಲೆ ಹಿಂದಿಕ್ಕಿದ ಶ್ರೀಲಂಕಾ ವೈದ್ಯರು: ವಿಶ್ವದ ಅತಿ ದೊಡ್ಡ ಕಿಡ್ನಿ ಕಲ್ಲು ಹೊರ ತೆಗೆದು ಗಿನ್ನಿಸ್ ರೆಕಾರ್ಡ್!"ಶ್ರೀಲಂಕಾದಲ್ಲಿ ಚೀನಾದ ಮಿಲಿಟರಿ ಉಪಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ವಿಕ್ರಮ ಸಿಂಘೆ ಅವರು, 'ಚೀನಾದವರು ಸುಮಾರು 1500 ವರ್ಷಗಳಿಂದ ದೇಶದಲ್ಲಿದ್ದಾರೆ ಮತ್ತು ಇಲ್ಲಿಯವರೆಗೆ ಯಾವುದೇ ಮಿಲಿಟರಿ ನೆಲೆ ಇಲ್ಲ. ದ್ವೀಪ ರಾಷ್ಟ್ರವು ಚೀನಾದೊಂದಿಗೆ ಯಾವುದೇ ಮಿಲಿಟರಿ ಒಪ್ಪಂದವನ್ನು ಹೊಂದಿಲ್ಲ. ಚೀನಾ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳುತ್ತದೆ ಎಂದು ನಾನು ಭಾವಿಸುವುದಿಲ್ಲ. 2017ರಲ್ಲಿ 99 ವರ್ಷಗಳ ಭೋಗ್ಯಕ್ಕೆ ಹಂಬಂಟೋಟಾದ ದಕ್ಷಿಣ ಬಂದರನ್ನು ಚೀನಾ ಪಡೆದಿತ್ತು. ಚೀನಾದಿಂದ ಮಿಲಿಟರಿ ಬಳಕೆಯ ಯಾವುದೇ ಸಮಸ್ಯೆಗಳಿಲ್ಲ. ಹಂಬಂಟೋಟಾ ಬಂದರನ್ನು ಚೀನಾದ ವ್ಯಾಪಾರಿಗಳಿಗೆ ನೀಡಲಾಗಿದ್ದರೂ, ಅದರ ಭದ್ರತೆಯನ್ನು ಶ್ರೀಲಂಕಾ ಸರ್ಕಾರ ನಿಯಂತ್ರಿಸುತ್ತಿದೆ. ದಕ್ಷಿಣ ನೌಕಾ ಕಮಾಂಡ್ ಅನ್ನು ಹಂಬಂಟೋಟಕ್ಕೆ ಸ್ಥಳಾಂತರಿಸಲಾಗುವುದು ಮತ್ತು ನಾವು ಹತ್ತಿರದ ಪ್ರದೇಶಗಳಲ್ಲಿ ಹಂಬಂಟೋಟದಲ್ಲಿ ಒಂದು ಸೇನಾ ಬ್ರಿಗೇಡ್ ಅನ್ನು ಪಡೆದುಕೊಂಡಿದ್ದೇವೆ ಎಂದು ಅವರು ಭರವಸೆ ನೀಡಿದರು.ಕಳೆದ ವರ್ಷ, ಶ್ರೀಲಂಕಾ ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಉಪಗ್ರಹ ಟ್ರ್ಯಾಕಿಂಗ್ ಹಡಗು ಯುವಾನ್ ವಾಂಗ್ 5 ಅನ್ನು ಹಂಬಂಟೋಟಾ ಬಂದರಿನಲ್ಲಿ ಲಂಗರು ಹಾಕಲು ಅವಕಾಶ ಮಾಡಿಕೊಟ್ಟಿತು, ಆಯಕಟ್ಟಿನ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಕಡಲ ಉಪಸ್ಥಿತಿಯ ಬಗ್ಗೆ ಭಾರತ ಮತ್ತು ಅಮೆರಿಕ ಈ ಹಿಂದೆ ಸಾಕಷ್ಟು ಬಾರಿ ಕಳವಳ ವ್ಯಕ್ತಪಡಿಸಿವೆ. ಪ್ರಮುಖವಾಗಿ ಶ್ರೀಲಂಕಾ ಬಂದರಿಗೆ ಹೋಗುವ ಮಾರ್ಗದಲ್ಲಿ ಹಡಗಿನ ಟ್ರ್ಯಾಕಿಂಗ್ ವ್ಯವಸ್ಥೆಗಳು ಭಾರತೀಯ ಸ್ಥಾಪನೆಗಳ ಮೇಲೆ ಕಣ್ಗಾವಲು ಮಾಡಲು ಚೀನಾ ಪ್ರಯತ್ನಿಸುವ ಸಾಧ್ಯತೆಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿತ್ತು. 2014ರಲ್ಲಿ ಕೊಲಂಬೊ ಚೀನಾದ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗೆ ತನ್ನ ಬಂದರುಗಳಲ್ಲಿ ಡಾಕ್ (ನಿಲ್ಲಿಸಲು) ಮಾಡಲು ಅನುಮತಿ ನೀಡಿದ ನಂತರ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದನ್ನೂ ಓದಿ: ಅಳಿವಿನಂಚಿನಲ್ಲಿರುವ 1 ಲಕ್ಷ ಕೋತಿಗಳಿಗೆ ಚೀನಾ ಬೇಡಿಕೆ: ರಫ್ತು ಮಾಡಲು ಶ್ರೀಲಂಕಾ ಸರ್ಕಾರ ಗ್ರೀನ್ ಸಿಗ್ನಲ್!ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಪ್ರಕ್ಷುಬ್ಧತೆಯ ನಡುವೆಯೇ ದೇಶದಿಂದ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ರಾಜೀನಾಮೆಯ ನಂತರ 74 ವರ್ಷದ ವಿಕ್ರಮಸಿಂಘೆ ಅವರು ಕಳೆದ ವರ್ಷ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದು 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರದ ಶ್ರೀಲಂಕಾದ ಕೆಟ್ಟ ಪರಿಸ್ಥಿತಿಯಾಗಿತ್ತು.