ಎಲ್ ಐಸಿ ನೂತನ ಅಧ್ಯಕ್ಷರಾಗಿ ಸಿದ್ಧಾರ್ಥ್ ಮೊಹಂತಿ ನೇಮಕ: ಕೇಂದ್ರ ಸರ್ಕಾರ ಆದೇಶ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಅಧ್ಯಕ್ಷರಾಗಿ ಸಿದ್ಧಾರ್ಥ ಮೊಹಂತಿ ಅವರನ್ನು ಕೇಂದ್ರ ಸರ್ಕಾರ ಶುಕ್ರವಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಅಧ್ಯಕ್ಷರಾಗಿ ಸಿದ್ಧಾರ್ಥ ಮೊಹಂತಿ ಅವರನ್ನು ಕೇಂದ್ರ ಸರ್ಕಾರ ಶುಕ್ರವಾರ ನೇಮಕ ಮಾಡಿ ಆದೇಶ ಹೊರಡಿಸಿದೆ.ಫೈನಾನ್ಶಿಯಲ್‌ ಸರ್ವಿಸಸ್‌ ಇನ್‌ಸ್ಟಿಟ್ಯೂಷನ್ಸ್‌ ಬ್ಯೂರೊ (ಎಫ್‌ಎಸ್‌ಐಬಿ) ಮೊಹಂತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಕಳೆದ ತಿಂಗಳು ಶಿಫಾರಸು ಮಾಡಿತ್ತು. ಎಲ್‌ಐಸಿ ಅಧ್ಯಕ್ಷರಾಗಿ ಎಂ.ಆರ್‌. ಕುಮಾರ್‌ ಅವರ ಅಧಿಕಾರಾವಧಿಯು ಮಾರ್ಚ್‌ 13ಕ್ಕೆ ಕೊನೆಗೊಂಡ ನಂತರ, ಮೊಹಂತಿ ಅವರು ಹಂಗಾಮಿ ಅಧ್ಯಕ್ಷರಾಗಿ ಸೇವೆಯಲ್ಲಿದ್ದರು. ಇದನ್ನೂ ಓದಿ: ಎಲ್ ಐಸಿ ಹೂಡಿಕೆದಾರರಿಗೆ ಒಂದೇ ತಿಂಗಳಲ್ಲಿ 1.78 ಲಕ್ಷ ಕೋಟಿ ರೂ. ನಷ್ಟ!ಮೂಲಗಳ ಪ್ರಕಾರ, ಮೊಹಂತಿ ಅವರನ್ನು 2025ರ ಜೂನ್‌ 7ರವರೆಗೆ ಎಲ್‌ಐಸಿ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಅಂತೆಯೇ ಬಿ.ಸಿ. ಪಟ್ಟನಾಯಕ್‌ ಅವರನ್ನು ಐಆರ್‌ಡಿಎಐನ ಆಜೀವ ಸದಸ್ಯರನ್ನಾಗಿ ಸರ್ಕಾರ ನೇಮಿಸಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯ ಅನುಮೋದನೆಯ ನಂತರ ಎರಡು ನೇಮಕಾತಿಗಳಿಗೆ ಅಧಿಸೂಚನೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.ಪ್ರಸ್ತುತ, ಕುಮಾರ್ ಅವರು ಮಾರ್ಚ್ 13, 2023 ರಂದು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಯ ವ್ಯವಸ್ಥಾಪಕ ನಿರ್ದೇಶಕರಾದ ಮೊಹಾಂತಿ ಅವರು ದೇಶದ ಅತಿದೊಡ್ಡ ಜೀವ ವಿಮಾ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿದ್ದಾರೆ.ಇದನ್ನೂ ಓದಿ: ಎಲ್ ಐಸಿ ಐಪಿಓ ಜೊತೆಗೆ ಇವುಗಳ ಮೇಲೂ ಇರಲಿ ಒಂದು ಕಣ್ಣು! (ಹಣಕ್ಲಾಸು)2021 ರಲ್ಲಿ, ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಸಿಬ್ಬಂದಿ) ನಿಯಮಗಳು, 1960 ಗೆ ತಿದ್ದುಪಡಿ ಮಾಡುವ ಮೂಲಕ ಸರ್ಕಾರವು ಅಧ್ಯಕ್ಷರ ನಿವೃತ್ತಿ ವಯಸ್ಸನ್ನು 62 ವರ್ಷಗಳವರೆಗೆ ವಿಸ್ತರಿಸಿತ್ತು. ನಿಯಮಗಳಲ್ಲಿ ಮಾಡಲಾದ ಬದಲಾವಣೆಗಳನ್ನು ಭಾರತೀಯ ಜೀವ ವಿಮಾ ನಿಗಮ (ಸಿಬ್ಬಂದಿ) ತಿದ್ದುಪಡಿ ನಿಯಮಗಳು, 2021 ಎಂದು ಕರೆಯಲಾಗುತ್ತದೆ.ಏತನ್ಮಧ್ಯೆ, ಪಟ್ನಾಯಕ್ ಕಳೆದ ತಿಂಗಳು ಎಲ್ಐಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾದರು. ಅವರ ಸ್ಥಾನಕ್ಕೆ ತಬಲೇಶ್ ಪಾಂಡೆ ನೇಮಕವಾಗಿದ್ದಾರೆ.