'ನೀವು ಬಿರಿಯಾನಿಯನ್ನು ದಕ್ಷಿಣ ಭಾರತದ ಉಪಾಹಾರ ಎಂದು ಕರೆದು ಒಬ್ಬ ಹೈದರಾಬಾದಿಯನ್ನು ಅವಮಾನಿಸಲು ಸಾಧ್ಯವಿಲ್ಲ': ಸತ್ಯ ನಡೆಲ್ಲಾ ಹೈದರಾಬಾದ್ ಬಿರಿಯಾನಿ ವರ್ಲ್ಡ್ ಫೇಮಸ್. ಇದರ ರುಚಿಗೆ ಬಹುಶಃ ಮನಸೋಲದವರಿರಲಿಕ್ಕಿಲ್ಲ. ಆದರೆ ಅದು ಜನಪ್ರಿಯ ದಕ್ಷಿಣ ಭಾರತದ ಬೆಳಗಿನ ಉಪಾಹಾರ ತಿಂಡಿಯೇ? ಬೆಂಗಳೂರು: ಹೈದರಾಬಾದ್ ಬಿರಿಯಾನಿ ವರ್ಲ್ಡ್ ಫೇಮಸ್. ಇದರ ರುಚಿಗೆ ಬಹುಶಃ ಮನಸೋಲದವರಿರಲಿಕ್ಕಿಲ್ಲ. ಆದರೆ ಅದು ಜನಪ್ರಿಯ ದಕ್ಷಿಣ ಭಾರತದ ಬೆಳಗಿನ ಉಪಾಹಾರ ತಿಂಡಿಯೇ?ಹೈದರಾಬಾದ್ ಮೂಲದವರಾದ ಮೈಕ್ರೊಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಡೆಲ್ಲಾ ಚಾಟ್ ಜಿಪಿಟಿ() ಸಾಫ್ಟ್ ವೇರ್ ಜೊತೆ ಇತ್ತೀಚೆಗೆ ಮಾತನಾಡುವಾಗ ತಮ್ಮ ಆಕ್ಷೇಪ ವ್ಯಕ್ತಪಡಿಸಿ ಸಾಫ್ಟ್ ವೇರ್ ಕಂಪೆನಿ ಸತ್ಯ ನಡೆಲ್ಲಾ ಅವರ ಕ್ಷಮೆಯಾಚಿಸಿದ ಘಟನೆ ನಡೆದಿದು. ಇದೆಲ್ಲ ಆಗಿದ್ದು ಕೇವಲ ಒಂದು ಬಿರಿಯಾನಿ ವಿಷಯಕ್ಕೆ.ಚಾಟ್ ಜಿಪಿಟಿ ಬಹಳ ಪ್ರಖ್ಯಾತ ಎಐ( ) ಆಧಾರಿತ ಸಾಫ್ಟ್ ವೇರ್ ಮತ್ತು ಚಾಟ್ ರೊಬೋಟ್ ಆಗಿದೆ. ಭವಿಷ್ಯದಲ್ಲಿ ಬಹಳ ಜನಪ್ರಿಯವಾಗುವ ದಕ್ಷಿಣ ಭಾರತದ ಬೆಳಗಿನ ಉಪಾಹಾರ ಯಾವುದು ಎಂದು ಚಾಟ್ ಜಿಪಿಟಿಯನ್ನು ಕೇಳಿದರು. ರೊಬೋಟ್ ದಕ್ಷಿಣ ಭಾರತದ ಜನಪ್ರಿಯ ತಿನಿಸುಗಳಾದ ಇಡ್ಲಿ, ದೋಸೆ, ವಡೆಯ ಹೆಸರನ್ನು ಹೇಳಿತು.ಆದರೆ ಅದು ಕೊಟ್ಟಿದ್ದ ಆಯ್ಕೆಯಲ್ಲಿ ಬಿರಿಯಾನಿ ಕೂಡ ಇತ್ತು. ಅದು ನಡೆಲ್ಲಾ ಅವರಿಗೆ ಸರಿ ಕಾಣಿಸಲಿಲ್ಲ. ಅವರು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಿಯೇ ಬಿಟ್ಟರು. ಹೈದರಾಬಾದ್ ಮೂಲದವನಾಗಿ ಬಿರಿಯಾನಿಯನ್ನು ದಕ್ಷಿಣ ಭಾರತದ ಉಪಾಹಾರ ಎಂದು ಹೇಳಿ ನನ್ನ ಬುದ್ಧಿವಂತಿಕೆಗೆ ಅವಮಾನ ಮಾಡಬೇಡಿ ಎಂದುಬಿಟ್ಟರು.ಇದನ್ನೂ ಓದಿ: 'ಭಾರತದ ಡಿಜಿಟಲ್ ರೂಪಾಂತರವು ಸ್ಪೂರ್ತಿದಾಯಕವಾಗಿದೆ': ಪ್ರಧಾನಿ ಮೋದಿ ಭೇಟಿ ಮಾಡಿದ ಸತ್ಯ ನಡೆಲ್ಲಾಕೂಡಲೇ ಸಾಫ್ಟ್ ವೇರ್ ಸಾರಿ ತಪ್ಪಾಯ್ತು ಎಂದು ಹೇಳಿತು. ನಂತರ ಚಾಟ್ ಜಿಪಿಟಿಯಲ್ಲಿ ಇಡ್ಲಿ ಮತ್ತು ದೋಸೆಯಲ್ಲಿ ಯಾವುದು ಉತ್ತಮ ಎಂದು ಕೇಳಿ ಆಟವಾಡಿ ನೋಡೋಣ ಎಂದು ನಡೆಲ್ಲಾ ಹೇಳಿದರು. ಇದಕ್ಕೆ ಇಂಗ್ಲಿಷಿನ ಖ್ಯಾತ ನಾಟಕಗಾರ ಶೇಕ್ಸ್ ಪಿಯರ್ ನ ಸಂಭಾಷಣೆಯನ್ನು ಸೇರಿಸಲು ಹೇಳಿದರು. ' '': @ @ @_ritusingh # # # # # ../3xcQrddY4Aನಡೆಲ್ಲಾ ಅವರು ನಿನ್ನೆ ಬೆಂಗಳೂರಿನಲ್ಲಿ ನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಜಸ್ಟ್ ಜೋಕ್ಸ್ ಸೀರಿಯಸ್ ಚರ್ಚೆ, ಮಾತುಕತೆಗೆ ಮುನ್ನ ನಿಮ್ಮನ್ನೆಲ್ಲ ಮೂಡಿಗೆ ತರೋಣವೆಂದು ಈ ಆಟ ಆಡಿಸಿದ್ದೇನೆ ಎಂದು ಸತ್ಯ ನಡೆಲ್ಲಾ ನೆರೆದಿದ್ದ ಪ್ರೇಕ್ಷಕರಿಗೆ ಹೇಳಿದರು. ನಂತರ ಅತ್ಯಾಧುನಿಕ ಮತ್ತು ಭಾರತದಲ್ಲಿ ಎಐಯ ನಾವೀನ್ಯತೆ ಕುರಿತು ಮಾತನಾಡಿದರು.