ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-06-2024)
ನಿತ್ಯ ನೀತಿ :ಸೋತೆ ಎಂದು ಚಿಂತೆ ಪಡಬೇಡ. ಜೀವನ ಇಷ್ಟೇನಾ ಎಂದು ಮರುಗಬೇಡ. ಎಲ್ಲವನ್ನೂ ಕಳೆದುಕೊಂಡೆ ಎಂದು ಕೊರಗಬೇಡ. ನಿನಗಿಂತ ಕೆಳಗಿನವರನ್ನು ನೋಡಿ ನೀನು ಸಮಾಧಾನ ಪಡು. ದೇವರು ಯಾರನ್ನೂ ಕೈ ಬಿಡುವುದಿಲ್ಲ. ದೇವರಲ್ಲಿ ನಂಬಿಕೆ ಇಡು. ನಂಬಿಕೆಯೇ ದೇವರು.
ಪಂಚಾಂಗ : ಶುಕ್ರವಾರ , 28-06-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷತಿಥಿ: ಸಪ್ತಮಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಸೌಭಾಗ್ಯ / ಕರಣ: ಬಾಲವ
ಸೂರ್ಯೋದಯ – ಬೆ.05.57ಸೂರ್ಯಾಸ್ತ – 06.50ರಾಹುಕಾಲ – 10.30-12.00ಯಮಗಂಡ ಕಾಲ – 3.00-4.30ಗುಳಿಕ ಕಾಲ – 7.30-9.00
ರಾಶಿಭವಿಷ್ಯ :ಮೇಷ: ರಾಜಕೀಯದವರಿಂದ ಅನುಕೂಲ.ವೃಷಭ: ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ.ಮಿಥುನ:ವಿಪರೀತ ಕೆಲಸದಿಂದಾಗಿ ದೇಹಾಲಸ್ಯ ಉಂಟಾಗುವುದರಿಂದ ವಿಶ್ರಾಂತಿ ಬಯಸುವಿರಿ.
ಕಟಕ: ಭಾವನೆಗಳಿಗೆ ಪೆಟ್ಟು ಬೀಳಲಿದೆ.ಸಿಂಹ: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ.ಕನ್ಯಾ: ಮನೆಯಲ್ಲಿ ಸಂತಸದ ವಾತಾವರಣವಿರಲಿದೆ. ನಿರೀಕ್ಷಿತ ಸ್ಥಾನಮಾನ ಸಿಗಲಿದೆ.
ತುಲಾ: ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕ ಗೌರವ ಹಾಗೂ ಪ್ರತಿಫಲ ಸಿಗಲಿದೆ.ವೃಶ್ಚಿಕ: ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ.ಧನುಸ್ಸು: ಭೂ ವ್ಯವಹಾರ ದಲ್ಲಿ ತೊಡಗಿಕೊಂಡ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.
ಮಕರ: ನಿಮ್ಮ ಉಜ್ವಲ ಭವಿಷ್ಯಕ್ಕೆ ಹೊಸ ಸ್ನೇಹ ಸಹಕಾರಿಯಾಗಲಿದೆ.ಕುಂಭ: ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.ಮೀನ: ಪತ್ನಿಯ ಸಹಕಾರದಿಂದ ನಿಮ್ಮ ಕೆಲಸ-ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ.