ಭಾರತ ತಂಡದ ಟ್ವೆಂಟಿ-20 ಕ್ಯಾಪ್ಟನ್ ಆಗ್ತಾರಾ ಹಾರ್ದಿಕ್‌ ಪಾಂಡ್ಯ..?
ನವದೆಹಲಿ,ಜು.1-ಭಾರತ ತಂಡದ ಟ್ವೆಂಟಿ-20 ಮಾದರಿ ಕ್ರಿಕೆಟ್‌ನ ನೂತನ ನಾಯಕರಾಗಿ ಹಾರ್ದಿಕ್‌ ಪಾಂಡ್ಯ ಆಯ್ಕೆ ಆಗಲಿರುವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಸುಳಿವು ನೀಡಿದ್ದಾರೆ.
ವೆಸ್ಟ್‌ಇಂಡೀಸ್‌‍ನ ಬಾರ್ಬಡೋಸ್‌‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ 7 ರನ್‌ಗಳ ಗೆಲುವು ಸಾಧಿಸಿ ಚಾಂಪಿಯನ್‌ಪಟ್ಟ ಅಲಂಕರಿಸಿದ ಬೆನ್ನಲ್ಲೇ ರೋಹಿತ್‌ಶರ್ಮಾ ಚುಟುಕು ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರಿಂದ ತೆರವಾ ಗಿರುವ ನಾಯಕನ ಸ್ಥಾನಕ್ಕೆ ಹಾರ್ದಿಕ್‌ ಪಾಂಡ್ಯರೇ ಸೂಕ್ತ ಎಂಬ ತೀರ್ಮಾನಕ್ಕೆ ಬಿಸಿಸಿಐ ತೀರ್ಮಾನಕ್ಕೆ ಬಂದಿದೆ.
ಭಾರತ ತಂಡದ ಟ್ವೆಂಟಿ- 20 ಮಾದರಿ ಕ್ರಿಕೆಟ್‌ನ ನಾಯಕನ ಸ್ಥಾನಕ್ಕೆ ಹಾರ್ದಿಕ್‌ ಪಾಂಡ್ಯ ಹೆಸರೇ ಬಹುತೇಕ ನಿರ್ಧಾರವಾಗಿದ್ದು ಈ ಕುರಿತು ಶೀಘ್ರವೇ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದ್ದಾರೆ.
`ಭಾರತ ತಂಡದ ನಾಯಕನ ನಿರ್ಣಯವನ್ನು ಸದಸ್ಯರು ತೀರ್ಮಾನಿಸುತ್ತಾರೆ. ಅವರೊಂದಿಗೆ ಚರ್ಚಿಸಿ ಶೀಘ್ರವೇ ನಮ ನಿರ್ಣಯವನ್ನು ತಿಳಿಸುತ್ತೇವೆ. ನೀವು ಹಾರ್ದಿಕ್‌ ಪಾಂಡ್ಯ ಅವರೇ ನಾಯಕರಾಗಬೇಕು ಎಂದು ಬಯಸಿದರೆ, ಆತನ ಫಾರ್ಮ್‌ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತವೆ. ಆದರೆ ಆತ ನಾಯಕನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾನೆ ಎಂಬ ಭರವಸೆ ಮಂಡಳಿಯ ಸದಸ್ಯರಿಗೆ ಇದೆ’ ಎಂದು ಬಿಸಿಸಿಐ ಕಾರ್ಯದರ್ಶಿ ತಿಳಿಸಿದ್ದಾರೆ.
2022ರ ಟಿ20 ವಿಶ್ವಕಪ್‌ ಟೂರ್ನಿಯ ನಂತರ ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಟೀಮ್‌ ಇಂಡಿಯಾದ ಹಂಗಾಮಿ ನಾಯಕರಾಗಿ ಹಾರ್ದಿಕ್‌ ಪಾಂಡ್ಯ ಕಾರ್ಯನಿರ್ವಹಿಸಿದ್ದು ಹಲವು ಸರಣಿಗಳನ್ನು ಗೆಲ್ಲುವ ಮೂಲಕ ತಮ ಸಾಮರ್ಥ್ಯ ತೋರಿಸಿದ್ದಾರೆ. ಅದೇ ರೀತಿ 2022ರ ಐಪಿಎಲ್‌ ಟೂರ್ನಿಯಲ್ಲಿ ಗುಜರಾತ್‌ ಟೈಟನ್‌್ಸಗೆ ತಮ ಕ್ಯಾಪ್ಟನ್ಸಿಯಲ್ಲಿ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಚಾಂಪಿಯನ್‌ಪಟ್ಟ ಗೆದ್ದುಕೊಟ್ಟಿದ್ದಾರೆ.