ಬಜೆಟ್‌ನಲ್ಲಿ ಮುಸ್ಲಿಂರಿಗೆ 15% ಮೀಸಲಾತಿ ಆರೋಪ ಸಂಪೂರ್ಣ ಸುಳ್ಳು ; ಚಿದಂಬರಂ
ನವದೆಹಲಿ, ಮೇ 16 (ಪಿಟಿಐ)ಹಿಂದಿನ ಕಾಂಗ್ರೆಸ್‌‍ ಸರ್ಕಾರವು ಮುಸ್ಲಿಮರಿಗೆ ಬಜೆಟ್‌ನಲ್ಲಿ ಶೇ.15 ರಷ್ಟು ಮೀಸಲಿಡಲು ಬಯಸಿತ್ತು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಕಾಂಗ್ರೆಸ್‌‍ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.
ಹಿಂದೂ-ಮುಸ್ಲಿಂರ ನಡುವೆ ಬಿರುಕು ಮೂಡಿಸುವವರು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದ ಮರುದಿನವೇ ಅವರು ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸುವ ತಮ್ಮ ಎಂದಿನ ಆಟವನ್ನು ಆಡಿದ್ದಾರೆ ಎಂದು ಚಿದಂಬರಂ ಆರೋಪಿಸಿದ್ದಾರೆ.
ಗೌರವಾನ್ವಿತ ಪ್ರಧಾನ ಮಂತ್ರಿಯವರ ಹೇಳಿಕೆಗಳು ಹೆಚ್ಚು ವಿಲಕ್ಷಣವಾಗಿವೆ ಮತ್ತು ಅವರ ಭಾಷಣ ಬರಹಗಾರರು ತಮ್ಮ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಎಕ್ಸ್ ಮಾಡಿದ್ದಾರೆ.
ಕೇಂದ್ರ ಬಜೆಟ್‌ನ ಶೇ.15ರಷ್ಟನ್ನು ಮುಸ್ಲಿಮರಿಗೆ ಮಾತ್ರ ಮೀಸಲಿಡಲು ಡಾ. ಮನಮೋಹನ್‌ ಸಿಂಗ್‌ ಯೋಜನೆ ರೂಪಿಸಿದ್ದರು ಎಂಬ ಗೌರವಾನ್ವಿತ ಪ್ರಧಾನಿಯವರ ಆರೋಪ ಸಂಪೂರ್ಣ ಸುಳ್ಳು. ಕಾಂಗ್ರೆಸ್‌‍ ಮುಸ್ಲಿಂ ಬಜೆಟ್‌ ಮತ್ತು ಹಿಂದೂ ಬಜೆಟ್‌ ಮಂಡಿಸಲಿದೆ ಎಂಬ ಅವರ ಮುಂದಿನ ಆರೋಪ ಅತಿರೇಕವಾಗಿದೆ. ಇದನ್ನು ಕೇವಲ ಭ್ರಮೆ ಎಂದು ನಿರೂಪಿಸಬಹುದು ಎಂದು ಮಾಜಿ ಹಣಕಾಸು ಸಚಿವರು ಹೇಳಿದರು.
ಭಾರತದ ಸಂವಿಧಾನದ 112 ನೇ ವಿಧಿಯು ಒಂದು ವಾರ್ಷಿಕ ಹಣಕಾಸು ಹೇಳಿಕೆಯನ್ನು ಮಾತ್ರ ಪರಿಗಣಿಸುತ್ತದೆ, ಅದು ಕೇಂದ್ರ ಬಜೆಟ್‌ ಆಗಿದೆ ಎಂದು ಚಿದಂಬರಂ ಹೇಳಿದರು ಮತ್ತು ಎರಡು ಬಜೆಟ್‌ಗಳು ಹೇಗೆ ಇರುತ್ತವೆ ಎಂದು ಕೇಳಿದರು.