ನನ್ನನ್ನು ಸಿಬಿಐ ದಾಳಿಗೆ ಸಿಲುಕಿಸಲು ಫಡ್ನವಿಸ್‌‍ ಸಂಚು : ಅನಿಲ್‌ ದೇಶ್‌ಮುಖ್‌
"    ...   ": -   
ನಾಗ್ಪುರ, ಸೆ 10 (ಪಿಟಿಐ)ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಮತ್ತು ಎನ್‌ಸಿಪಿ (ಎಸ್‌‍ಪಿ) ನಾಯಕ ಅನಿಲ್‌ ದೇಶ್‌ಮುಖ್‌ ಅವರು ರಾಜ್ಯದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ಅವರು ನನ್ನನ್ನು ಕೇಂದ್ರ ಏಜೆನ್ಸಿಗಳ ಸಹಾಯದಿಂದ ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಎಕ್‌್ಸನಲ್ಲಿನ ಪೋಸ್ಟ್‌ನಲ್ಲಿ, ನಾಲ್ಕು ವರ್ಷಗಳ ಹಿಂದಿನ ಘಟನೆಯಲ್ಲಿ ಬಿಜೆಪಿ ನಾಯಕ ಫಡ್ನವಿಸ್‌‍ ಅವರ ಆದೇಶದ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ ಎಂದು ದೇಶಮುಖ್‌ ಹೇಳಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ನಾನು ಮಹಾರಾಷ್ಟ್ರದ ಗಹ ಸಚಿವನಾಗಿದ್ದಾಗ ಬಿಜೆಪಿ ಮುಖಂಡ ಗಿರೀಶ್‌ ಮಹಾಜನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಲಗಾಂವ್‌ ಪೊಲೀಸ್‌‍ ಅಧಿಕಾರಿಯೊಬ್ಬರಿಗೆ ಒತ್ತಡ ಹೇರ್ದೆಿ ಎಂದು ಆರೋಪಿಸಲಾಗಿದೆ.
ನನ್ನ ಮಾಹಿತಿಯ ಪ್ರಕಾರ, ದೇವೇಂದ್ರ ಫಡ್ನವೀಸ್‌‍ ನನ್ನ ಮೇಲೆ ದಾಳಿ ನಡೆಸಿ ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ದೆಹಲಿ (ಕೇಂದ್ರ) ಮತ್ತು ಇಡಿ-ಸಿಬಿಐ ಸಹಾಯದಿಂದ ಮಹಾರಾಷ್ಟ್ರ ರಾಜಕೀಯವನ್ನು ಅತ್ಯಂತ ಕೆಳಮಟ್ಟಕ್ಕೆ ತಂದಿರುವ ದೇವೇಂದ್ರ ಫಡ್ನವಿಸ್‌‍ ಅವರಿಗೆ ನಾನು ಹೇಳಲು ಬುದ್ದಿ ಕಲಿಸುತ್ತೇನೆ ಎಂದಿದ್ದಾರೆ.
2020 ರಲ್ಲಿ ರಾಜ್ಯದ ಬಿಜೆಪಿ ನಾಯಕರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ ಆರೋಪದ ಮೇಲೆ ಸಿಬಿಐ ದೇಶಮುಖ್‌ ಅವರು ಅಂದಿನ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪ್ರವೀಣ್‌ ಪಂಡಿತ್‌ ಚವಾಣ್‌ ಮತ್ತು ಇಬ್ಬರು ಪೊಲೀಸ್‌‍ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ ಎಂದು ಅಧಿಕಾರಿಗಳು ಕಳೆದ ವಾರ ತಿಳಿಸಿದ್ದಾರೆ.
2020 ರಲ್ಲಿ ವಿರೋಧ ಪಕ್ಷದಲ್ಲಿದ್ದ ಫಡ್ನವಿಸ್‌‍ ಅವರು ಅಂದಿನ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ಗೆ ಹಸ್ತಾಂತರಿಸಿದ ಪೆನ್‌ ಡ್ರೈವ್‌ನಿಂದ ಹುಟ್ಟಿಕೊಂಡ ಎರಡು ವರ್ಷಗಳ ಪ್ರಾಥಮಿಕ ವಿಚಾರಣೆಯ ನಂತರ ಸಿಬಿಐ ಈ ಪ್ರಕರಣವನ್ನು ದಾಖಲಿಸಿದೆ ಎಂದು ಅವರು ಹೇಳಿದರು.
ಜಲಗಾಂವ್‌ ಜಿಲ್ಲಾ ಮರಾಠಾ ವಿದ್ಯಾ ಪ್ರಸಾರಕ ಸಹಕಾರಿ ಸಮಾಜದ ಟ್ರಸ್ಟಿ ಮತ್ತು ವಕೀಲ ವಿಜಯ್‌ ಪಾಟೀಲ್‌ ಮತ್ತು ಆಗಿನ ಗಹ ಸಚಿವ ದೇಶಮುಖ್‌ ಅವರೊಂದಿಗೆ ಈಗ ಸಚಿವರಾಗಿರುವ ಬಿಜೆಪಿ ನಾಯಕ ಮಹಾಜನ್‌ ಅವರನ್ನು ಬಂಧಿಸಲು ಚವಾಣ್‌ ಪಿತೂರಿ ನಡೆಸಿದ್ದರು ಎಂದು ತೋರಿಸುವ ಪೆನ್‌ ಡ್ರೈವ್‌ ಬಾಂಬ್‌‍ ವೀಡಿಯೊಗಳನ್ನು ಒಳಗೊಂಡಿದೆ.