2027 ರ ವೇಳೆಗೆ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ
ಬೆಂಗಳೂರು,ಫೆ.22- ಭಾರತದ ಆರ್ಥಿಕತೆ ಮತ್ತು ಇಕ್ವಿಟಿ ಮಾರುಕಟ್ಟೆಗಳ ಕುರಿತು ಜಾಗತಿಕ ಹೂಡಿಕೆ ಕುರಿತಾದ ಸಲಹಾ ಸಂಸ್ಥೆ ಆಶಾದಾಯಕ ಹೊರನೋಟ ನೀಡಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತ ಮೂಲಭೂತ ರಚನಾತ್ಮಕ ಸುಧಾರಣೆಗಳನ್ನು ಕಂಡಿದ್ದು, ದೇಶ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಂಡಿದೆ ಎಂದು ನ್ಯೂಯಾರ್ಕ್‌ ನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಸಂಸ್ಥೆ ತನ್ನ ಇತ್ತೀಚಿನ ಟಿಪ್ಪಣಿಯಲ್ಲಿ ತಿಳಿಸಿದೆ.
“ಮುಂದಿನ 4 ವರ್ಷಗಳಲ್ಲಿ ಭಾರತದ ಜಿಡಿಪಿ 5 ಟ್ರಿಲಿಯನ್‌ ಗೆ ತಲುಪಲಿದ್ದು, 2027 ರ ವೇಳೆಗೆ 3 ನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ. ಜಪಾನ್‌ ಮತ್ತು ಜರ್ಮನಿಯನ್ನು ಹಿಂದಿಕ್ಕಿ ಅತ್ಯಂತ ತ್ವರಿತವಾಗಿ ಬೆಳವಣಿಗೆಯಾಗುತ್ತಿರುವ ಆರ್ಥಿಕತೆಯಾಗುವ ವಸ್ತುಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲಿದೆ.
ಸುಸ್ಥಿರ ಆರ್ಥಿಕತೆಯ ಪ್ರಗತಿಯಲ್ಲಿ ಬರುವ 2030 ರ ವೇಳೆಗೆ ಭಾರತೀಯ ಷೇರು ಮಾರುಕಟ್ಟೆ 10 ಟ್ರಿಲಿಯನ್‌ ಡಾಲರ್‌ ಗೆ ತಲುಪಲಿದೆ. “ಭಾರತದ ಮಾರುಕಟ್ಟೆಯ ಬಂಡವಾಳೀಕರಣ 4.2 ಟ್ರಿಲಿಯನ್‌ ಡಾಲರ್‌ ಗೆ ತಲುಪಿ ಜಗತ್ತಿನ 5 ನೇ ‍ಶ್ರೇಯಾಂಕಕ್ಕೆ ಏರಿಕೆಯಾಗಲಿದೆ. ಅಮೆರಿಕ [44.7 ಟ್ರಿಲಿಯನ್‌ ಡಾಲರ್‌], ಚೀನಾ [9.8 ಟ್ರಿಲಿಯನ್‌ ಡಾಲರ್]‌, ಜಪಾನ್‌ [6 ಟ್ರಿಲಿಯನ್‌ ಡಾಲರ್]‌ ಮತ್ತು ಹಾಂಕಾಂಗ್‌ [4.8 ಟ್ರಿಲಿಯನ್‌ ಡಾಲರ್]‌ ಮೀರಿ ಭಾರತ ಸಾಧನೆ ಮಾಡಲಿದೆ” ಎಂದು ವರದಿ ಅಂದಾಜಿಸಿದೆ.
ಭಾರತದ ಇಕ್ವಿಟಿ ಮಾರುಕಟ್ಟೆಗಳು ಕಳೆದ 5-20 ವರ್ಷಗಳ ಅವಧಿಯಲ್ಲಿ ಡಾಲರ್‌ ಲೆಕ್ಕದಲ್ಲಿ ಸ್ಥಿರವಾದ 10% ರ ವಾರ್ಷಿಕ ಆದಾಯ ಗಳಿಸಲು ಸಮರ್ಥವಾಗಿವೆ; ಬೆಳವಣಿಗೆಯಾಗುತ್ತಿರುವ ಮಾರುಕಟ್ಟೆ ಜಾಗದಲ್ಲಿ ಅದರ ಯಾವುದೇ ಜಾಗತಿಕ ಗೆಳೆಯರಿಗಿಂತ ಉತ್ತಮವಾಗಿದೆ”. ನವೀಕೃತ ಬಂಡವಾಳ ವೆಚ್ಚದ ಚಕ್ರ ಮತ್ತು ದೃಢವಾದ ಗಳಿಕೆಯ ಪಟ್ಟಿಯಲ್ಲಿ ಭಾರತೀಯ ಮಾರುಕಟ್ಟೆಗಳು ಮುಂದಿನ 5-7 ವರ್ಷಗಳಲ್ಲಿ ಆಕರ್ಷಕ ಬೆಳವಣಿಗೆಯನ್ನು ಮುಂದುವರೆಸುತ್ತದೆ ಎಂದು ಸಂಸ್ಥೆ ಹೇಳಿದೆ.ಭಾರತೀಯ ಮಾರುಕಟ್ಟೆಗಳು ಈಕ್ವಿಟಿಕಗಳಲ್ಲಿ ಕೇವಲ 4.7% ರಷ್ಟು ಗೃಹ ಉಳಿತಾಯಕ್ಕೆ ಒಳಪಟ್ಟಿದೆ ಎಂದು ಜೆಫರಿಸ್‌ ಹೇಳಿದೆ. ಆದಾಗ್ಯೂ ಭಾರತದಲ್ಲಿ ಡಿಜಿಟಲ್‌ ಪ್ರಗತಿ ಸಾಂಪ್ರದಾಯಿಕ ಮತ್ತು ಚಿಲ್ಲರೆ ಹೂಡಿಕೆದಾರರ ನಡುವಿನ ಗೆರೆಯನ್ನು ಮುಸುಕುಗೊಳಿಸಿದೆ. ತಂತ್ರಜ್ಞಾನ ತನ್ನ ಬೆರಳ ತುದಿಯಲ್ಲಿದ್ದು, ಚಿಲ್ಲರೆ ಹೂಡಿಕೆದಾರರಿಗೆ ಇದೀಗ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಾರುಕಟ್ಟೆ ಕೈಗೆಟುಕುತ್ತಿದೆ. ಇದು ಹೂಡಿಕೆದಾರರನ್ನು ಮತ್ತಷ್ಟು ಪ್ರಜಾತಂತ್ರ ಮಾರ್ಗದಲ್ಲಿ ಕೊಂಡೊಯ್ಯುತ್ತಿದೆ. ಚಿಲ್ಲರೆ ಹೂಡಿಕೆ ವಲಯದಲ್ಲಿ ಶಿಸ್ತುಬದ್ಧ ಧೋರಣೆಯಿದ್ದು, ಇದು ವ್ಯವಸ್ಥಿತ ಹೂಡಿಕೆ ಯೋಜನೆ [ಎಸ್.ಐ.ಪಿಗಳಲ್ಲಿ] ಅಪಾರ ಜನಪ್ರಿಯತೆ ಪಡೆದುಕೊಂಡಿರುವುದನ್ನು ಪ್ರತಿಬಿಂಬಿಸುತ್ತದೆ. “ನಿಯಂತ್ರಕರ ಮೂಲಕ ಮ್ಯೂಚುವಲ್‌ ಫಂಡ್‌ ಗಳಲ್ಲಿ ಹೂಡಿಕೆ ಮಾಡುವ ಕುರಿತು ಜನಜಾಗೃತಿ ವೃದ್ಧಿಯಾಗುತ್ತಿದೆ ಮತ್ತು ಇದರಿಂದ ಭಾರತೀಯ ಇಕ್ವಿಟಿ ಮಾರುಕಟ್ಟೆಗಳಿಂದ ಹೆಚ್ಚಿನ ಉಳಿತಾಯವನ್ನು ಹಣಕಾಸು ಸಚಿವಾಲಯ ನಿರೀಕ್ಷಿಸಿದೆ”
ಭಾರತದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ಸೇರ್ಪಡೆಯಾಗಲು ಅವಕಾಶಬಲಿಷ್ಠ ಬೆಳವಣಿಗೆಯ ಪ್ರೊಫೈಲ್‌ ನಲ್ಲಿ ಭಾರತೀಯ ಮಾರುಕಟ್ಟೆಯ ತೂಕ ಹೆಚ್ಚಾಗುತ್ತಿದೆ  ಮತ್ತು ಹೆಚ್ಚಿನ ಆದಾಯ ಸೃಜನೆಯಾಗುತ್ತಿರುವುದರಿಂದ ವಿದೇಶಿ ಹೂಡಿಕೆ ಒಳಹರಿವನ್ನು ಹೆಚ್ಚಿನದಾಗಿ ಆಕರ್ಷಿಸಬಹುದಾಗಿದೆ ಎಂದು ಜೆಫರಿಸ್‌ ಮತ್ತಷ್ಟು ಬೆಳಕು ಚೆಲ್ಲಿದೆ. ದಕ್ಷಿಣ ಕೋರಿಯಾದ ಬಹುರಾಷ್ಟ್ರೀಯ ಕಂಪೆನಿ ಹುಂಡೈ ಇಂಡಿಯಾ ತನ್ನ ಭಾರತೀಯ ಅಂಗ ಸಂಸ್ಥೆಯನ್ನು ಪಟ್ಟಿ ಮಾಡಲು ನಿರ್ಧರಿಸಿದ ಉದಾಹರಣೆಯನ್ನು ಉಲ್ಲೇಖಿಸಿ ದೇಶದಲ್ಲಿ ಬಲವಾದ ನೆಲೆ ಹೊಂದಿರುವ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳೆಂದು ಪಟ್ಟಿ ಮಾಡಲಾದ ಅಮೆಜಾನ್‌, ಸ್ಯಾಮ್‌ ಸಂಗ್‌, ಆಪಲ್‌, ಟಯೋಟಾ ಮತ್ತಿತರ ಘಟಕಗಳಾಗಲು ಇದು ಸೂಕ್ತ ಸಮಯವಾಗಿದೆ” ಎಂದು ವರದಿ ಹೇಳಿದೆ. “ನಾವು ಈ ನಿಟ್ಟಿನಲ್ಲಿ ಆಲೋಚಿಸಬೇಕು – ಇದು ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ಆಟದ ಬದಲಾವಣೆ ಕಾಣಲು ಸಾಧ್ಯವಾಗಲಿದೆ” ಎಂದು ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಹನಿ…ಹನಿ…ನೀರಿಗೂ ತತ್ವಾರನಿರಂತರ ಸುಧಾರಣೆಗಳು ಬಲವಾದ ಭವಿಷ್ಯಕ್ಕಾಗಿ ಅಡಿಪಾಯ ಹಾಕಿವೆಹೆಚ್ಚಿನ ಬೆಳವಣಿಗೆಗಾಗಿ ಪರಿಸರ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಕೈಗೊಂಡ ನಿರಂತರ ಸುಧಾರಣೆಗಳಿಗೆ ವರದಿ ಮನ್ನಣೆ ನೀಡಿದೆ. “2014 ರಿಂದ ಮೋದಿ ಸರ್ಕಾರ ಭಾರತದಲ್ಲಿ “ಸುಗಮ ವ್ಯವಹಾರ” ಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಯಶಸ್ವಿಯಾಗಿ ಸುಧಾರಣೆಗಳನ್ನು ತಂದಿದೆ. 2017 ರಲ್ಲಿ ಮೈಲಿಗಲ್ಲು ಎನ್ನಲಾದ ಜಿ.ಎಸ್.ಟಿ ಸುಧಾರಣೆ, ಬಾರತದಾದ್ಯಂತ ಸರಕು ಮತ್ತು ಸೇವೆಗಳ ʼಯುರೋಝನ್‌ ಶೈಲಿಯ ಹರಿವನ್ನು ಸೃಷ್ಟಿಸುವ ರೀತಿಯಲ್ಲಿ ಒಂದು ಸಾಮಾನ್ಯ ರಾಷ್ಟ್ರೀಯ ವ್ಯವಸ್ಥೆಗೆ ಬಹು ತೆರಿಗೆಯ ರಚನೆಗಳನ್ನು ಸಂಕುಚಿತಗೊಳಿಸಿತು.  ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ತಪ್ಪು ಸಾಲಗಳನ್ನು ಸ್ವಚ್ಛಗೊಳಿಸಲು 2017 ರಲ್ಲಿ ನಿರ್ಣಾಯಕವಾಗಿ ಜಾರಿಗೆ ತಂದ ದಿವಾಳಿ ಕಾನೂನುಗಳು ಸಹಕಾರಿಯಾಗಲಿವೆ. 2017 ರ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ [ರೇರಾ] ಮೂಲಕ ಅಸಂಘಟಿತ ಆಸ್ತಿ ವಲಯವನ್ನು ಶುದ್ಧಗೊಳಿಸಿತು” ಎಂದು ಹೇಳಿದೆ.
“ಜಗತ್ತಿನಲ್ಲಿ ಹೆಚ್ಚಾಗುತ್ತಿರುವ ಭೂ ಭೌಗೋಳಿಕ ಆತಂಕವನ್ನು ನಿವಾರಿಸಲು ಕಳೆದ ಸೆಪ್ಟೆಂಬರ್‌ ನಲ್ಲಿ ನಡೆದ ಜಿ20 ಶೃಂಗಸಭೆ ವ್ಯಾಪಕವಾಗಿ ಒಪ್ಪಿಕೊಂಡ ಯಶಸ್ಸಿನಲ್ಲಿ ಪ್ರತಿಫಲಿಸಿದಂತೆ ಭಾರತ ಬ್ರಿಕ್ಸ್‌ ನ ಸಂಪೂರ್ಣ ಸದಸ್ಯತ್ವದೊಂದಿಗೆ ಜಿ7 ನೊಂದಿಗೆ ಉತ್ತಮ ಸ್ಥಿತಿಯಲ್ಲಿ ಉಳಿಯಲು ಚತುರತೆಯಿಂದ ಕಾರ್ಯ ನಿರ್ವಹಿಸಿದೆ”.