ಬಿಹಾರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಂದೇ ಗಂಟೆಯೊಳಗೆ ಮದ್ಯ ನಿಷೇಧ ತೆರವು
'     ':            
ಪಾಟ್ನಾ,ಸೆ.15– ಬಿಹಾರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಒಂದೇ ಗಂಟೆಯೊಳಗೆ ಮದ್ಯದ ಮೇಲಿನ ನಿಷೇಧವನ್ನು ರದ್ದುಗೊಳಿಸುವುದಾಗಿ ಎಂದು ರಾಜಕೀಯ ತಂತ್ರಜ್ಞ ಮತ್ತು ಕಾರ್ಯಕರ್ತ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನ್‌ ಸೂರಜ್‌ ಪಕ್ಷವು ಗೆದ್ದರೆ ಮದ್ಯ ನಿಷೇಧವನ್ನು ಅಂತ್ಯಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಕ್ಟೋಬರ್‌ 2 ರಂದು ಪ್ರಾರಂಭವಾಗಲಿರುವ ತಮ ರಾಜಕೀಯ ಪಕ್ಷ ಜನ್‌ ಸೂರಾಜ್‌ ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಖಚಿತಪಡಿಸಿದರು.
ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದೇವೆ. ಜನ್‌ ಸೂರಜ್‌ ಸರ್ಕಾರ ರಚನೆಯಾದರೆ ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ಕೊನೆಗೊಳಿಸುತ್ತೇವೆ.ನಿತೀಶ್‌ ಕುಮಾರ್‌ ಮತ್ತು ತೇಜಸ್ವಿ ಯಾದವ್‌ ಇಬ್ಬರೂ ನಾಯಕರ ಅವಧಿಯಲ್ಲಿ ಬಿಹಾರ ನಷ್ಟ ಅನುಭವಿಸಿದೆ ಎಂದರು.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮತ್ತು ನಿತೀಶ್‌ ಕುಮಾರ್‌ ನಡುವೆ ಯಾರು ಯಾರೊಂದಿಗೆ ಕೈಜೋಡಿಸಿದ್ದಾರೆ, ಯಾರ ಕಾಲಿಗೆ ಬಿದ್ದಿದ್ದಾರೆ ಎಂಬುದು ತಿಳಿದಿಲ್ಲ, ಎರಡೂ ಸಂದರ್ಭಗಳಲ್ಲಿ ಬಿಹಾರ ಸೋತಿದೆ, ಬಿಹಾರದ ಜನರು ಇಬ್ಬರನ್ನೂ ಬೆಂಬಲಿಸಿದ್ದಾರೆ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದರು. ಬಿಹಾರದ ಜನರು 30 ವರ್ಷಗಳಿಂದ ಅವರಿಬ್ಬರನ್ನೂ ನೋಡಿದ್ದಾರೆ ಎಂದು ಹೇಳಿದ್ದಾರೆ.
ನಿಷೇಧ ಕಾನೂನು ನಿತೀಶ್‌ ಕುಮಾರ್‌ ಅವರ ಪಾಲಿಗೆ ಧಕೋಸ್ಲಾ (ಶಮ್‌) ಹೊರತು ಬೇರೇನೂ ಅಲ್ಲ ಎಂದ ಅವರು, ಪ್ರಸ್ತುತ ನಿಷೇಧವು ನಿಷ್ಪರಿಣಾಮಕಾರಿಯಾಗಿದೆ. ಇದು ಮದ್ಯದ ಅಕ್ರಮ ವಿತರಣೆಗೆ ಕಾರಣವಾಗಿದೆ ಮತ್ತು ರಾಜ್ಯಕ್ಕೆ 20,000 ಕೋಟಿ ರೂ.ಗಳ ಸಂಭಾವ್ಯ ಅಬಕಾರಿ ಆದಾಯವನ್ನು ವಂಚಿತಗೊಳಿಸಿದೆ.
ಅಕ್ರಮ ಮದ್ಯ ವ್ಯಾಪಾರದಿಂದ ರಾಜಕಾರಣಿಗಳು ಮತ್ತು ಅಧಿಕಾರಿಗಳು ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಬಿಹಾರದ ದುಃಸ್ಥಿತಿಗೆ ನಿತೀಶ್‌ಕುಮಾರ್‌ ಮತ್ತು ಅವರ ಹಿಂದಿನ ಲಾಲು ಪ್ರಸಾದ್‌ ಕಾರಣ. ಆದರೆ ಕಾಂಗ್ರೆಸ್‌‍ ಮತ್ತು ಬಿಜೆಪಿ ಕೂಡ ಆಪಾದನೆಯನ್ನು ಹಂಚಿಕೊಂಡಿವೆ ಎಂದು ಹೇಳಿದ್ದಾರೆ.
ಜನ್‌ ಸೂರಾಜ್‌ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ ಎಂದು ನಾನು ಸ್ಪಷ್ಟಪಡಿಸುತ್ತೇನೆ, ಒಂದು ಕಡಿಮೆ ಅಲ್ಲ ಎಂದು ಕಿಶೋರ್‌ ಹೇಳಿದರು, ಅವರ ಹಿಂದಿನ ಅವತಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಆಮ್‌ ಆದಿ ಪಕ್ಷದಂತಹ ನಾಯಕರ ಚುನಾವಣಾ ಪ್ರಚಾರವನ್ನು ನಿರ್ವಹಿಸಿದ್ದಾರೆ.