ಸಂಶೋಧನೆ, ಕಲಿಕೆಗೆ ಹೆಚ್ಚು ಒತ್ತು : ಪ್ರಧಾನಿ ಮೋದಿ
ನವದೆಹಲಿ, ಏ. 23 (ಪಿಟಿಐ): ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿನ ಕಾರ್ಯಕ್ಷಮತೆ ಸುಧಾರಣೆಯನ್ನು ಕ್ಯೂಎಸ್ ಅಧ್ಯಕ್ಷ ನುಂಜಿಯೊ ಕ್ವಾಕ್ವಾರೆಲ್ಲಿ ಶ್ಲಾಸಿದ ಒಂದು ದಿನದ ನಂತರ, ತಮ್ಮ ಸರ್ಕಾರವು ಸಂಶೋಧನೆ, ಕಲಿಕೆ ಮತ್ತು ನಾವೀನ್ಯತೆಗಳ ಮೇಲೆ ದೊಡ್ಡ ರೀತಿಯಲ್ಲಿ ಗಮನಹರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತೀಯ ವಿಶ್ವವಿದ್ಯಾನಿಲಯಗಳು ಈ ವರ್ಷ ಎಲ್ಲಾ ಜಿ20 ರಾಷ್ಟ್ರಗಳಲ್ಲಿ ಅತ್ಯಧಿಕ ಕಾರ್ಯಕ್ಷಮತೆಯ ಸುಧಾರಣೆಯನ್ನು ಪ್ರದರ್ಶಿಸಿವೆ, ಅವುಗಳ ಸರಾಸರಿ ಶ್ರೇಯಾಂಕದಲ್ಲಿ ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಶೇ.14ರಷ್ಟು ಸುಧಾರಣೆಯಾಗಿದೆ ಎಂದು ಕ್ವಾಕ್ವಾರೆಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅವರ ಪೋಸ್ಟ್ ಅನ್ನು ಟ್ಯಾಗ್ ಮಾಡಿದ ಮೋದಿ, ಇದು ನೋಡಲು ಉತ್ತೇಜನಕಾರಿಯಾಗಿದೆ! ನಮ್ಮ ಸರ್ಕಾರವು ಸಂಶೋಧನೆ, ಕಲಿಕೆ ಮತ್ತು ನಾವೀನ್ಯತೆಗಳ ಮೇಲೆ ದೊಡ್ಡ ರೀತಿಯಲ್ಲಿ ಗಮನಹರಿಸುತ್ತಿದೆ. ಮುಂಬರುವ ದಿನಗಳಲ್ಲಿ, ಈ ಒತ್ತು ಇನ್ನಷ್ಟು ಆಳವಾಗಿ ನಮ್ಮ ಯುವ ಶಕ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.
    !      ,       .    ,      ,     .://./EUz9pwWYLf
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯವು (ಜೆಎನ್‍ಯು) ಲಂಡನ್ ಮೂಲದ ಉನ್ನತ ಶಿಕ್ಷಣ ವಿಶ್ಲೇಷಣಾ ಸಂಸ್ಥೆಯಾದ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಈ ತಿಂಗಳ ಆರಂಭದಲ್ಲಿ ಘೋಷಿಸಿದ ಅಸ್ಕರ್ ಶ್ರೇಯಾಂಕಗಳಲ್ಲಿ ಭಾರತದಲ್ಲಿ ಅತ್ಯುನ್ನತ ಶ್ರೇಣಿಯ ವಿಶ್ವವಿದ್ಯಾಲಯವಾಗಿದೆ.
ವಿಶ್ವವಿದ್ಯಾನಿಲಯವು ಅಭಿವೃದ್ಧಿ ಅಧ್ಯಯನಕ್ಕಾಗಿ ಜಾಗತಿಕವಾಗಿ 20 ನೇ ಸ್ಥಾನದಲ್ಲಿದೆ. ಐಐಎಂ-ಅಹಮದಾಬಾದ್ ಜಾಗತಿಕವಾಗಿ ವ್ಯಾಪಾರ ಮತ್ತು ನಿರ್ವಹಣಾ ಅಧ್ಯಯನಕ್ಕಾಗಿ ಟಾಪ್ 25 ಸಂಸ್ಥೆಗಳಲ್ಲಿ ಸ್ಥಾನ ಪಡೆದಿದ್ದರೆ, ಐಐಎಂ-ಬೆಂಗಳೂರು ಮತ್ತು ಐಐಎಂ-ಕಲ್ಕತ್ತಾ ಟಾಪ್ 50 ರಲ್ಲಿರುವುದು ವಿಶೇಷವಾಗಿದೆ.