“ದರಿದ್ರ ಕಾಂಗ್ರೆಸ್‌‍ ಸರ್ಕಾರ ಇರುವವರೆಗೂ ರೈತರಿಗೆ ನೆಮ್ಮದಿಯಿಲ್ಲ” : ಆರ್‌.ಅಶೋಕ್‌
ಬೆಂಗಳೂರು,ಆ.12-ದರಿದ್ರ ಕಾಂಗ್ರೆಸ್‌‍ ನೇತೃತ್ವದ ಸರ್ಕಾರ ಇರುವವರೆಗೂ ನಾಡಿನ ರೈತರಿಗೆ ನೆಮ್ಮದಿ ಇಲ್ಲ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಟೀಕಾಪ್ರಹಾರ ನಡೆಸಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ಧ ಪೋಸ್ಟ್‌ ಮಾಡಿರುವ ಅವರು, ಈ ವರ್ಷ ದೇವರ ದಯೆಯಿಂದ ಒಳ್ಳೆಯ ಮಳೆ ಬಂದರೂ ಡ್ಯಾಂನಲ್ಲಿ ನೀರು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೈತರ ಈ ಸಂಕಷ್ಟಕ್ಕೆ ಕಾಂಗ್ರೆಸ್‌‍ ಸರ್ಕಾರ ದಿವ್ಯ ನಿರ್ಲಕ್ಷ್ಯವೇ ಕಾರಣ. ಕಳೆದ ವರ್ಷ ಬರಗಾಲದಲ್ಲಿ ಸಕಾಲಕ್ಕೆ ಪರಿಹಾರ ಕೊಡಲಿಲ್ಲ ಎಂದು ಅಶೋಕ್‌ ಆರೋಪಿಸಿದ್ದಾರೆ.
ರೈತರ ಈ ಸಂಕಷ್ಟಕ್ಕೆ ಕಾಂಗ್ರೆಸ್ ಸರ್ಕಾರ ದಿವ್ಯ ನಿರ್ಲಕ್ಷ್ಯವೇ ಕಾರಣ.❌ಕಳೆದ ವರ್ಷ ಬರಗಾಲದಲ್ಲಿ ಸಕಾಲಕ್ಕೆ ಪರಿಹಾರ ಕೊಡಲಿಲ್ಲ.❌ಈ ವರ್ಷ ದೇವರ ದಯೆಯಿಂದ ಒಳ್ಳೆ ಮಳೆ ಬಂದರೂ ಡ್ಯಾಂನಲ್ಲಿ ನೀರು ಉಳಿಸಿಕೊಳ್ಳಲು ಆಗಲಿಲ್ಲ.ಒಟ್ಟಿನಲ್ಲಿ ಈ ದರಿದ್ರ@INCKarnatakaಸರ್ಕಾರ ಇರುವವರೆಗೂ ನಾಡಿನ ರೈತರಿಗೆ ನೆಮ್ಮದಿ ಇಲ್ಲ.../2phKXo5c9Y