| ಧಾರವಾಡ ಸವಿ ನೆನಪುಗಳು | |
| ಕಾಡಕತ್ತವಾ | |
| ಧಾರವಾಡ ಮಳೆಯಂಗ | |
| ಆದರೇನು ಮಾಡುವುದೂ | |
| ಮಳೆಗಾಲಕ್ಕೆ ಇನ್ನೂ ಎರಡು ತಿಂಗಳ ಬಾಕಿ ಅದ | |
| ಅಲ್ಲಿವರೆಗೂ | |
| ಹಾಳಾದ ಈ ಬಿಸಿಲಿನ ಕಾಟಕ್ಕೆ | |
| ನಡುನಡುವೆ ನೆನಪುಗಳ | |
| ಬೆವರಿನ ಜಳಕ…! | |
| ಹೀಗಿತ್ತು ಧಾರವಾಡದ ಬದುಕು | |
| ಬೇಕಾಗಿದ್ದು ಎಲ್ಲ ಇತ್ತು | |
| ಹಸಿವು ಇತ್ತು, ಓದಿನ ಖುಷಿ ಇತ್ತು | |
| ಹಣದ ಕೊರತೆ ಇತ್ತು | |
| ಬದುಕಿನ ಚಿಂತಿ ಇತ್ತು | |
| ಆದರೂ ಏನಾದರೂ ಮಾಡಬೇಕು ಎನ್ನುವ ಛಲ ಇತ್ತು | |
| ಒಳ್ಳೆಯ ಗೆಳೆಯರು ಬಳಗ ಇತ್ತು | |
| ಚಿಂತನೆ ಇತ್ತು ಚಿಂತಿಸುವ | |
| ಜೀವಗಳಿದ್ದವು | |
| ರಾತ್ರಿ ಕನಸುಗಳಿಗೆ ಜೊತೆಯಾಗುವ ನನಸಿನ ಸರಮಾಲೆ ಇತ್ತು…! | |
| ಧಾರವಾಡ ಬಿಟ್ಟ ಬಂದ ನಂತರವೂ ಬಿಡದೆ ಕಾಡುವ ಮೋಹವಿತ್ತು | |
| ಧಾರವಾಡ ಹಳೆ ಗೆಳತಿಯಂಗ ಕಾಡಾತ್ತೀತು | |
| ಆಕಿ ನಗು, ಹುಡುಗಾಟ, ಹುಡುಕಾಟವಿತ್ತು ತಿರುಗಾಟ ಅವಳ ಜೊತಿಗೀನ | |
| ನಾಟಕ ಮಜಲುನ ಮಜವಿತ್ತು ಬದುಕಿಗೆ ಬೇಕಾದ ವಿಚಾರ | |
| ಸಂಕೀರ್ಣವಿತ್ತು ಜೊತೆಗೆ ಅವಳು ಸಂಕೀರಣವಾಗಿದ್ದಳು | |
| ದಾರಿಗೆ ಚೆಲ್ಲಿದ ಹೂನಗೆ | |
| ಚೈತ್ರದ ಚಿರುಗು ಇತ್ತು | |
| ಶಿಶಿರಕ್ಕೆ ಎಲೆ ಉದುರಿಸೋ ಮುನಿಸಿತ್ತು | |
| ಮೌನವಿತ್ತು ಜೊತೆಗೆ ಚಿಲಿಪಿಲಿ ಕಲರವವಿತ್ತು…! | |
| ಖಾಲಿ ತಲೆಯಲ್ಲಿ ಸಿದ್ದಾಂತದ ನೆಲೆಯೂರಿತ್ತು ಎಡ ಬಲ | |
| ವಿಚಾರದ ಹುಚ್ಚಾಟದಾಗ | |
| ಕ್ರಾಂತಿಯ ಕಿಡಿಯ ಬೆಳಕಿತ್ತು | |
| ಜೊತೆಗೆ ಸಾಂಸ್ಕ್ರತಿಯ ಸವಿತ್ತು | |
| ಬದುಕಿಗೆ ಎನಬೇಕಾಗಿತ್ತು ಅದು ಇತ್ತು ಇದು ಇತ್ತು ನಾವು ಪಡಕೂಂಡುವಿ | |
| ಧಾರವಾಡನ ನಾವು ಕಳಕೊಂಡವಿ ಬಿಟ್ಟವಿ | |
| ಜೀವನ ಬೆನ್ನಹತ್ತಿ ಸಂಸಾರದಾ ಬಿದ್ದಿವಿ…! | |
| ನಾನು ಮುದುಕನಾದೆ | |
| ಧಾರವಾಡಕ್ಕೆ ಮಾತ್ರ ಇನ್ನು ಹರೆಯ ನಿತ್ಯ ಬರುವ ಜೀವಗಳಿಗೆ | |
| ತನ್ನ ಮಡಿಲೂಳಗೆ | |
| ಬರಮಾಡಿಕೊಂಡು | |
| ತನ್ನಲ್ಲಿ ಇರುವದನ್ನು ಹಂಚಿಬಿಡುವ ನಿಸ್ವಾರ್ಥ | |
| ಗುಣವಿದೆ ಈ ಮಣ್ಣಿಗೆ | |
| ಇನ್ನು ಹರೆಯ ಬೆಳಯುತಲಿದೆ | |
| ವಸಂತಕ್ಕೆ ಮೈನೇರದ ವಧುವಿನಂತೆ…! | |
| ( ಧಾರವಾಡ ಶಹರವನ್ನು ಇಷ್ಟು ಪದಗಳಲ್ಲಿ ಬಂಧಿಸಿಡಲು ಅಸಾಧ್ಯವೆ ಇದು ಆದಾವ ಮೂಲೆಗೂ ಸಾಲದು..) | |
| -ವೃಶ್ಚಿಕ ಮುನಿ |