| ಕನ್ನಡ ಸಾಹಿತ್ಯ.ಕಾಂ | |
| ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
| ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ | |
| ಸಂಜೆಯ ಕೆಂಪು ಕರಗುವ ಹೊತ್ತು, | |
| ಮರದ ಬೊಡ್ಡೆಗೆ ಆತು | |
| ಕೂತಿದ್ದ ಪುಟ್ಟ ಹುಡುಗ. | |
| ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ | |
| ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ | |
| ಸಂಜೆಯಾಕಾಶಕ್ಕೆ ಗೆರೆ ಬರೆದ | |
| ಗಿರಿಶಿಖರಗಳ ನೆರಳು. | |
| ಈ ನೆರಳುಗಳ ನಡುವೆ | |
| ನೆರ್ಳಾಗಿ ಕೂತವನನ್ನು | |
| ‘ಯಾಕೋ ಕೂತಿದ್ದೀಯಾ?-’ | |
| ಅಂದೆ. | |
| ಹೆದರಿ ಮೇಲೆದ್ದ. ಕಡ್ಡಿ ಕಾಲಿನ ಮೆಲೆ | |
| ಹರುಕು ಚಿಂದಿಯ, ಜೋಲು ಮೋರೆಯ, | |
| ಕೆದರಿದ ತಲೆಯ ಕೆಳಗೆ ಗಾಬರಿ ಕಣ್ಣು; | |
| ಅಳು ಬೆರೆತ ಮಾತು; | |
| ‘ನಾನು ಬರಲಿಲ್ಲ, ಮನೆಯಲ್ಲಿ | |
| ಒಡೇರು ಒದೀತಾರೆ…ಅದಕ್ಕೆ ಇಲ್ಲಿ…’ | |
| ಸುತ್ತ ಕತ್ತಲ ಕಾಡು; ಆ ಬಗ್ಗೆ | |
| ಭಯವಿಲ್ಲ ಇವನಿಗೆ | |
| ತಪ್ಪಿಸಿಕೊಂಡ ದನ ಬಾರದ್ದಕ್ಕೆ | |
| ತನಗೆ ಬೀಳುವೇಟಿನ ಭಯಕ್ಕೆ | |
| ಇಲ್ಲಿ, ಸದ್ದಿರದೆ ಕೂತಿದ್ದಾನೆ. | |
| ದನ ಬಾರದ್ದು ಇವನ ತಪ್ಪಲ್ಲ; | |
| ಆದರೂ ದನ ಬಾರದೆ ಇವನು | |
| ಹಿಂದಿರುಗುವಂತಿಲ್ಲ; ಹಿಂದಿರುಗಿದನೊ | |
| ಏಟು ತಪ್ಪುವುದಿಲ್ಲ. ಹಾಗಂತ | |
| ದಟ್ಟ ಕಾಡಿನ ಮೇಲೆ ಕತ್ತಲೆ ಇಳಿದು | |
| ಹಬ್ಬುವುದು ನಿಲ್ಲುವುದಿಲ್ಲ; ಕಪ್ಪೆಗಳ | |
| ವಟ ವಟ, ಚಿಕೆಗಳ ಮಿಣ ಮಿಣ- ಯಾವುದೂ | |
| ನಿಲ್ಲುವುದಿಲ್ಲ. ಈ ಕತ್ತಲೆಯ ಒಳಗೆಲ್ಲೊ | |
| ಕಾದಿದ್ದಾನೆ ಒಡೆಯ. | |
| ಕೈಯಲ್ಲಿ ಚಾವಟಿ ಹಿಡಿದು, ಹೀಗೆಯೇ | |
| ಇಂಥ ಕಡ್ಡಿ ಕಾಲಿನ, ಜೋಲು ಮೋರೆಯ | |
| ಹಾಲುಗಣ್ಣಿನ ಮೈಯ ಚರ್ಮ ಸುಲಿಯುತ್ತ | |
| ಈ ದಟ್ಟ ಕಾಡಿನ ಕತ್ತಲೆಗೆ ಕೆಂಗಣ್ಣು ಹಾಯಿಸುತ್ತ. | |
| ಕವನ ಜಿ ಎಸ್ ಶಿವರುದ್ರಪ್ಪ | |
| ವ್ಯರ್ಥ | |
| ಇಲ್ಲ, ನಾವೂ ನೀವೂ ಸೇರಲೇ ಇಲ್ಲ; | |
| ಮುಖಕ್ಕೆ ಮುಖ, ಎದೆಗೆ ಎದೆ ಹತ್ತಿರ ತಂದು | |
| ಮಾತಾಡಲೇ ಇಲ್ಲ. | |
| ನಮ್ಮ ಮಧ್ಯೆ ಸದಾ ಗಾಳಿ, ಮಳೆ ಕೆಸರು; | |
| ತಂತಿ ಕಂಬಗಳುರುಳಿ, | |
| ಇದ್ದ ಸೇತುವೆ ಮುರಿದು | |
| ಅಲ್ಲಿನ ಗಾಡಿ ಅಲ್ಲೇ | |
| ಇಲ್ಲಿನ ಗಾಡಿ ಇಲ್ಲೇ. | |
| ಮುಚ್ಚಿದ್ದ ಕಿಟಕಿ, ಹೊಗೆ ಹಿಡಿದ ಸೂರಿನ ಕೆಳಗೆ | |
| ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ, | |
| ಗಿಡದಲ್ಲರಳುತ್ತಿದ್ದ ಮೊಗ್ಗುಗಳನ್ನು ಬಡಿದು ಕೆಡವುತ್ತ, | |
| ತಲೆಯನ್ನು ಗಾಳಿ ಊಳಿಡುವ ಪಾಳುಗುಡಿ ಮಾಡಿ | |
| ಹತ್ತಿದ ಹಣತೆಗಳನ್ನು ನಂದಿಸುತ್ತ | |
| ಕತ್ತಲಲ್ಲೇ ತಡಕಾಡಿಕೊಂಡು ಕೈ ಚಾಚುತ್ತೇವೆ, | |
| ರಾಂಗ್ ನಂಬರಿಗೆ ಟೆಲಿಫೋನು ಮಾಡಿ | |
| ಉತ್ತರಕ್ಕೆ ಕಾಯುತ್ತ ಕೂರುತ್ತೇವೆ. | |
| ***** | |
| ೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […] | |
| ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧ | |
| ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […] | |
| ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ | |
| ಟಿಪ್ಪಣಿ * | |
| ಹೆಸರು * | |
| ಮಿಂಚೆ * | |
| ಜಾಲತಾಣ | |
| ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. | |
| This site uses Akismet to reduce spam. Learn how your comment data is processed. | |
| ಬಿಟ್ಟ್ಯಾ | |
| ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
| ಟಿಪ್ಸ್ ಸುತ್ತ ಮುತ್ತ | |
| "ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
| ಮನ್ನಿ | |
| ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
| ಬುಗುರಿ | |
| ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |